Sri Manjunatha Charithe (Shiva Puraana) Lyrics

in Sri Manjunatha

Video:

LYRIC

ಆಕಾಶವೇ ಆಕಾರ…
ಭೂಮಿಯೇ ವಿಭೂತಿ…
ಅಗ್ನಿಯೇ ತ್ರಿನೇತ್ರ…
ವಾಯುವೇ ಚಲನ…
ಜಲವೇ ಜಗವಾಳೊ ಮಂದಹಾಸ..
ಪಂಚಭೂತಗಳಿಂದ ಆದ ಪ್ರಪಂಚೇಶ್ವರ…
ವಿಧಾತ… ವಿಶ್ವನಾಥ…ಆ ಆ…
ಭುವಿಯೊಳಗೆ ಆ ನಾಥನೇ ಶ್ರೀ ಮಂಜುನಾಥ…
 
ಶ್ರೀ ಮಂಜುನಾಥನ ಚರಿತೆ
ಮಧುರ ಮಧುರ ಮಹಾನಂದ ಶಿಖರ
ಶ್ರೀ ಮಂಜುನಾಥನ ಚರಿತೆ
ಮಧುರ ಮಧುರ ಮಹಾನಂದ ಶಿಖರ
ಮಂಜುನಾಥ ಚರಿತೆ
ಶ್ರೀ ಮಂಜುನಾಥ ಚರಿತೆ
ಮಂಜುನಾಥ ಚರಿತೆ
ಶ್ರೀ ಮಂಜುನಾಥ ಚರಿತೆ
 
ಅಮೃತಕ್ಕಾಗಿ ಕ್ಷೀರಸಾಗರಕಡಿಯೇ
ಆವಿರ್ಭವಿಸಿತು ಹಾಲಹಲ…
ಶಂಕರನ ಶಂಖದೊಳು
ಶುಭಕರ ತೀರ್ಥವಾಯಿತು ವಿಷ…
ಜೀವರಾಸಿಯ ರಕ್ಷಿಸಿ
ಶಿವ ವಿಷಕ್ಕಾದ ಅಂಕುಶ
ಓಂ ನಮಃ ಶಿವಾಯ….
ಓಂ ನಮಃ ಶಿವಾಯ….
ಪೂರ್ವಜರಾತ್ಮಕೆ ಶಾಂತಿಯ ನೀಡಲು
ಗಂಗೆಯ ಧರೆಗೆ ಕರೆತರಲು..
ತಪಸ್ಸನು ಮಾಡಿದ ಭಗೀರಥ…
ಸುರಧಾರೆ ವರಧಾರೆ ಮಹಧಾರೆ ಜಲಧಾರೆ
ಧುಮುಧುಮುಕಿ ಧರೆಗಿಳಿಯೆ ಧಾವಿಸಿದರೆ
ಅಲ್ಲೋಲ ಕಲ್ಲೋಲ ಭೂಮಿ
ಕಾಪಾಡ ಬಾರಯ್ಯ ಸ್ವಾಮಿ…
 
ತಡೆಯಬಲ್ಲೆಯ ನೀನು ಈ ಗಂಗೆಯ
ಜಲಸಮಾಧಿಯು ನೀನು ಮೃತ್ಯುಂಜಯ
ಹೇಗೆ ಪಡೆದೆ ಹರಿವ ಈ ಶಕ್ತಿಯ
ಹೆಣ್ಣೆ ಅರಿವೆಯ ನೀನು ಶಿವ ನಿರ್ಣಯ
ತಡೆವೆಯ ಕೈಲಾಸವಾಸ….
ಶಿವ ಶಿರವೇ ನಿನ್ನ ನಿವಾಸ…
 
ಪ್ರಿಯ ಗಂಗೆ ನಿನಗೇನು ಬೇಕು
ನಿನ್ನ ಮುಡಿಯೇ ಅರಮನೆಯಾಗಬೇಕು
ಆನಂದ….ಆನಂದ….
ಶಿವಗಂಗೆ ಪ್ರೇಮಾನುಬಂಧ….
ಬಾರೇ ಶಿವ ಶಿರಚಾರಿಣಿ…
ಧನ್ಯೋಸ್ಮಿ ಧನ್ಯೋಸ್ಮಿ ಸ್ವಾಮಿ…
 
ಹರ…ಆ ಆ ಆ ಆ…
ಭರ ಆ ಆ ಆ…ಪಾಲಿಸೋ..
ಸದಾ….ಆ ಆ ಆ ಆ …
ಶಿವ….ಆ ಆ ಆ ಆ ….ಪ್ರೀತಿಸೋ
ಸಖಿ….ಸಖಿ….ಪಾರ್ವತಿ ನೀ…
ಪ್ರಿಯೇ…..ಇದೇ…..ಸಂಹೃತಿ ನೀ…
 
ಹೇ ಶಂಕರ ಶಾಂತಿಸು….
ಆ ಮನ್ಮಥನ ಬದುಕಿಸು….
ಲೋಕಕಲ್ಯಾಣವನು ಕೋರಿ ಶಿವನು
ಪಾರ್ವತಿ ಪರಿಣಯಕೆ ವರನಾದನು
ಸತಿಗೆ ತನ ತನುವಲ್ಲಿ ಸಗಭಾಗ ನೀಡುತ
ಅರ್ಧನಾರೀಶ್ವರನಾದ….
ನಾದ ಶಿವನು…ವೇದ ಶಿವನು…ನಾಟ್ಯ ಶಿವನು…
 
||ಶ್ರೀ ಮಂಜುನಾಥನ ಚರಿತೆ
ಮಧುರ ಮಧುರ ಮಹಾನಂದ ಶಿಖರ||
||ಶ್ರೀ ಮಂಜುನಾಥನ ಚರಿತೆ
ಮಧುರ ಮಧುರ ಮಹಾನಂದ ಶಿಖರ||
||ಮಂಜುನಾಥ ಚರಿತೆ
ಶ್ರೀ ಮಂಜುನಾಥ ಚರಿತೆ||
||ಮಂಜುನಾಥ ಚರಿತೆ
ಶ್ರೀ ಮಂಜುನಾಥ ಚರಿತೆ…||

Sri Manjunatha Charithe (Shiva Puraana) song lyrics from Kannada Movie Sri Manjunatha starring Chiranjeevi, Arjun Sarja, Ambarish, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by K Raghavendra Rao and film is released on 2001