ಕನ್ನಡದ ತಾಯಿ ಶ್ರೀಭುವನೇಶ್ವರಿ
ಕನ್ನಡದ ಕುಲಶಕ್ತಿ ರಾಜೇಶ್ವರಿ
ಮುನಿಶೃಂಗ ಹನುಮ ರಾಮ ಮೆರೆದ ನಾಡಿದು
ಮೌನಿ ವಿದ್ಯಾರಣ್ಯ ಕಡೆದ ಗುಡಿಯಿದು
ಮಧ್ವ ಬಸವ ಅಲ್ಲಮಾದಿ ಮಹಿಮರೆಲ್ಲರು
ಸದ್ಧರ್ಮ ಕೀರ್ತಿ ನೀತಿ ನಡತೆಗಿಂಬು ಕೊಟ್ಟರು
ಕನ್ನಡದಾ ತಾಯಿ ಶ್ರೀಭುವನೇಶ್ವರಿ
ಕನ್ನಡದಾ ಕುಲಶಕ್ತಿ ರಾಜೇಶ್ವರಿ
ಪುಲಕೇಶಿ ಹೊಯ್ಸಳಾದಿ ಹಕ್ಕ ಬುಕ್ಕರು
ಕಲಿಗಳಾಗಿ ಗಂಡು ನಾಡೆನಿಸಿ ಮೆರೆದರು
ದಾನ ಶೀಲ ಕ್ಷಮಾ ಸ್ಥೈರ್ಯ ಸಹನೆ ತ್ಯಾಗವು
ಜ್ಞಾನವು ಭಕ್ತಿಯೊಡನೆ ಮೈಗೂಡಿ ಬಂದವು
|| ಕನ್ನಡದ ತಾಯಿ ಶ್ರೀಭುವನೇಶ್ವರಿ
ಕನ್ನಡದ ಕುಲಶಕ್ತಿ ರಾಜೇಶ್ವರಿ….||
ಬಲಿದಾನ ತ್ಯಾಗದಿಂದಲಿ ಪ್ರಬುದ್ಧರಾಗುವ
ಬಲತೇಜ ಸ್ಫೂರ್ತಿಗೊಂಡು ಇಂದು ಸಿದ್ಧರಾಗುವ
ಭಾರತೀಯರಾಗಿ ನಾಡಭಾಷೆ ಬಲಿಸುವಾ
ನಾಡಭಾಷೆ ಬಲಿಸುವಾ ಭಾರತಿಯಾಭಿಮಾನದಾತೆ
ಮೇಲ್ಮೈ ಕಾಣುವಾ... ಮೇಲ್ಮೈ ಕಾಣುವಾ
|| ಕನ್ನಡದ ತಾಯಿ ಶ್ರೀಭುವನೇಶ್ವರಿ
ಕನ್ನಡದ ಕುಲಶಕ್ತಿ ರಾಜೇಶ್ವರಿ….||
ಕನ್ನಡದ ತಾಯಿ ಶ್ರೀಭುವನೇಶ್ವರಿ
ಕನ್ನಡದ ಕುಲಶಕ್ತಿ ರಾಜೇಶ್ವರಿ
ಮುನಿಶೃಂಗ ಹನುಮ ರಾಮ ಮೆರೆದ ನಾಡಿದು
ಮೌನಿ ವಿದ್ಯಾರಣ್ಯ ಕಡೆದ ಗುಡಿಯಿದು
ಮಧ್ವ ಬಸವ ಅಲ್ಲಮಾದಿ ಮಹಿಮರೆಲ್ಲರು
ಸದ್ಧರ್ಮ ಕೀರ್ತಿ ನೀತಿ ನಡತೆಗಿಂಬು ಕೊಟ್ಟರು
ಕನ್ನಡದಾ ತಾಯಿ ಶ್ರೀಭುವನೇಶ್ವರಿ
ಕನ್ನಡದಾ ಕುಲಶಕ್ತಿ ರಾಜೇಶ್ವರಿ
ಪುಲಕೇಶಿ ಹೊಯ್ಸಳಾದಿ ಹಕ್ಕ ಬುಕ್ಕರು
ಕಲಿಗಳಾಗಿ ಗಂಡು ನಾಡೆನಿಸಿ ಮೆರೆದರು
ದಾನ ಶೀಲ ಕ್ಷಮಾ ಸ್ಥೈರ್ಯ ಸಹನೆ ತ್ಯಾಗವು
ಜ್ಞಾನವು ಭಕ್ತಿಯೊಡನೆ ಮೈಗೂಡಿ ಬಂದವು
|| ಕನ್ನಡದ ತಾಯಿ ಶ್ರೀಭುವನೇಶ್ವರಿ
ಕನ್ನಡದ ಕುಲಶಕ್ತಿ ರಾಜೇಶ್ವರಿ….||
ಬಲಿದಾನ ತ್ಯಾಗದಿಂದಲಿ ಪ್ರಬುದ್ಧರಾಗುವ
ಬಲತೇಜ ಸ್ಫೂರ್ತಿಗೊಂಡು ಇಂದು ಸಿದ್ಧರಾಗುವ
ಭಾರತೀಯರಾಗಿ ನಾಡಭಾಷೆ ಬಲಿಸುವಾ
ನಾಡಭಾಷೆ ಬಲಿಸುವಾ ಭಾರತಿಯಾಭಿಮಾನದಾತೆ
ಮೇಲ್ಮೈ ಕಾಣುವಾ... ಮೇಲ್ಮೈ ಕಾಣುವಾ
|| ಕನ್ನಡದ ತಾಯಿ ಶ್ರೀಭುವನೇಶ್ವರಿ
ಕನ್ನಡದ ಕುಲಶಕ್ತಿ ರಾಜೇಶ್ವರಿ….||