-
ಬೆಳಗಲಿ ಕನ್ನಡ ಜ್ಯೋತಿ
ಬೆಳಗಲಿ ಕನ್ನಡ ಪ್ರೀತಿ
ಹೃದಯಗಳ ಹಣತೆಗಳಲಿ
ನಾಡಭಕುತಿಯ ತೈಲವಿರಿಸಿ
ಬೆಳಗಲಿ ಕನ್ನಡ ಜ್ಯೋತಿ
ಬೆಳಗಲಿ ಕನ್ನಡ ಪ್ರೀತಿ
“ಕ”ಎಂದವರಿಗೆ ಕರುಣೆಯನು
“ನ್ನ”ಎಂದವರಿಗೆ ನಲ್ಮೆಯನು
“ಡ” ಎಂದವರಿಗೆ ಡಮರುಗ ಬಾರಿಸಿ
ಶಾಂತಿಯ ಸಾರುವ ಕನ್ನಡ ನಾಡಿದು
“ಅ” ಎಂದವರಿಗೆ ಅನ್ನವನು
“ಅಂ,ಅಃ”ಎಂದವರಿಗೆ ನೆರಳನ್ನು
ನಿತ್ಯ ನೀಡುವ ಸತ್ಯವಂತರ
ಪ್ರೀತಿಯ ಸಾರುವ ಕನ್ನಡ ನಾಡಿದು
ನಮ್ಮ ನಾಡಿಗೆ ಕವಿಋಷಿ ಪುಂಗವರ ಚರಿತೆ ಇದೆ
ಕರುನಾಡಿಗೆ ಜಗಜ್ಯೋಗಿ ಜಂಗಮರ ಹರಕೆ ಇದೆ
ಸಾವಿರ ವರ್ಷದ ಗೋವಿನ ಹಾಡಿದೆ ಮಣ್ಣ ಒಳಗೆ
ಕೈಗಳ ಮುಗಿದು ಕಾಲ್ಗಳ ತೊಳೆಯಿರಿ ಭುವನೇಶ್ವರಿಗೆ
||“ಕ”ಎಂದವರಿಗೆ ಕರುಣೆಯನು
“ನ್ನ”ಎಂದವರಿಗೆ ನಲ್ಮೆಯನು
“ಡ” ಎಂದವರಿಗೆ ಡಮರುಗ ಬಾರಿಸಿ
ಶಾಂತಿಯ ಸಾರುವ ಕನ್ನಡ ನಾಡಿದು||
ಆಹಹಹ
ಇದು ಶ್ರೀಗಂಧ ತುಂಬಿದ ನಾಡು
ಆಹಹಹ
ಇಲ್ಲಿ ಪ್ರಾಣಿಪಕ್ಷಿ ಮರಗಿಡವು
ಸವಿಗನ್ನಡ ಕಲಿವುದು ನೋಡು
ಓ ನಿಸರ್ಗದೇವಿ ಓಓ ನೀರೆರೆಯುತ್ತಾಳೆ
ಈ ನೆಲದ ಬನಸಿರಿಗೆ ದಿನವೂ ಚೆಂದ ಆನಂದ
ಈ ಕನ್ನಡ ನೆಲದ ಸಿರಿ ಶ್ರೀಗಂಧ
ದಸರ ಇದು ದಸರ
ಮೈಸೂರ ಒಡೆಯರ ವೈಭವವಿದೆ
ಅಂಬಾರಿ ಮೇಲೆ
ಅಂಬಾರಿ ಮೇಲೆ
ವಿಜಯ ದುಂದುಭಿಯ ಶುಭ ಕಹಳೆ ಕೂಗು ನೋಡು
ಅರಮನೆ ಮೇಲೆ
ಅರಮನೆ ಮೇಲೆ
ಭವ್ಯ ಇಲ್ಲಿನ ಪರಂಪರೆ ನವರಾತ್ರಿ ಬೆಳಕಿಗೆ ಲೋಕವೆ ಸೆರೆ
ಇದು ಕಣ್ಣಿಗೆ ಹಬ್ಬ ಆಆ
ಕರುನಾಡಿಗೆ ಹಬ್ಬ ಓಓ
ಜಗಮಗಿಸುವ ಜಗವೆಲ್ಲ ಮೆರೆಸುವ ದಸರ ಹಬ್ಬ
ದಸರ ಹಬ್ಬ ಎಂತ ಚೆಂದ ನೋಡು ನಮ್ಮ ನಾಡಿನ ಸಡಗರ
ಕಲಕಲ ಹರಿವಳು ಕಾವೇರಿ ನಮ್ಮ ಕಾವೇರಿ
ನಮ್ಮ ನಾಡಿಗೆ ಜೀವಜಲ ಇವಳು
ದುಡಿಯುವ ರೈತರ ಬೆವರಲ್ಲಿ ದಿನ ಮನೆಯುಟ್ಟು
ಬೆಳೆಯಾಗಿ ಬರುತಾಳೆ ಇವಳು
ಈ ಕೊಡಗಲ್ಲಿದೆ ಕಾವೇರಮ್ಮನ ತವರುಮನೆ
ಬೇಡೊ ಕೈಯ್ಯಿಗೆ ಬಾಗಿನ ಕೊಡುವಳು ಮನೆಮನೆಮನೆ
ಹೇ ಹೇ ಏನಿದು ಏನಿದು ಕರಾವಳಿ ಕರಾವಳಿ
ಕನ್ನಡ ತಾಯಿಗೆ ಕಡಿನ ಮುತ್ತಿನಲೆ ಪೋಣಿಸುತಿರುವಳು
ಪ್ರಭಾವಳಿ
ಅಲೆಅಲೆಗು ಕನ್ನಡದ ಕಲರವ ಚೆಲ್ಲೊ ಗುಣವು ಇದೆ
ಆಹಹಹಹ
ಓಓಓಓಓ
ಅರೆರೆರೆರೆ ಇದು ತಾನೆ ನಾಡಿನ ದೀವಳಿ
ರನ್ನ ಜನ್ನ ರಾಘವಾಂಕರ ನಾಡಿದು
ಎಂಟನೆ ಜ್ಞಾನಪೀಠಕು ಲಗ್ಗೆ ಇಟ್ಟಿರೊ ಕವಿನೆಲವಿದು
ದಾಸಶರಣ ಸರ್ವಜ್ಞರ ನಾಡಿದು
ಭೇದದ ಪದವಿಲ್ಲದ ನಾದದ ಜಾನಪದವಿದು
ಕರ್ನಾಟ ದೇಶಕ್ಕೆ ಇಂತ ನೂರಾರು ನವಿಲುಗರಿ
ಕಾವ್ಯಕಲೆಗಳಿಗೆ ಕರುನಾಡೆ ಮೇಲುಗಿರಿ
ಅರೆರೆರೆರೆ ಶಿಲ್ಪಕಲೆ ಓ ಜಕಣನ ಉಳಿಯನು ನೆನಪಿಸಿ ಉಳಿದಿರೊ ಬೇಲೂರು
ಅರೆರೆರೆರೆ ನಾಟ್ಯಕಲೆ ಐಹೊಳೆ ಬಾದಾಮಿ ಪಟ್ಟದಕಲ್ಲಿನ ದರಬಾರು
ಶಿಲೆಯ ಈ ಕೆತ್ತನೆಗೆ ಕಲೆಯ ಈ ಬಿತ್ತನೆಗೆ
ಯುಗಗಳು ಕಳೆದರು ಹೊಸತನ ಉಂಟು ಕನ್ನಡದಾಣೆ
ಕನ್ನಡತಿ ಮುಕುಟಕೆ ಇದೆ ಒಂದು ಕಾಣಿಕೆ
ಏ ಇದು ಹುಬ್ಬಳ್ಳಿ ಅಲ್ಲ ಹೂಬಳ್ಳಿ
ಜಟ್ಟಿಮಲ್ಲರಿಗೆ ಇದು ಗಟ್ಟಿನೆಲ ನೋಡು
ಅರೆ ಓ ಇತ್ತ ಧಾರವಾಡ ಧಾರಾಳವಾಡ
ಇದು ಉತ್ತರಾದಿ ಸಂಗೀತದ ನೆಲೆಬೀಡು
ಅತ್ತ ಚೆನ್ನಮ್ಮನೂರು ವೀರ ಕಥೆಗಳು ನೂರು
ಆ ಆಂಗ್ಲರ ಕಿತ್ತೊಗೆದ ವೀರವನಿತೆಯ ಕಿತ್ತೂರು
ನಮ್ಮ ಕನ್ನಡನಾಡಿನ ಹೆಮ್ಮೆಯ ಪುಟಗಳು ನೂರಾರು
ಪ್ರತಿ ಪುಟದಲು ಕರಪುಟವಿತ್ತ ವೀರರು ಸಾವಿರಾರು
ಕರ್ನಾಟ ದೇಶದ ಕೆಚ್ಚೆದೆ ಕಲಿಗಳ ಸಾಟಿಯಿಲ್ಲ ಯಾರು
ಯಾರನ್ನು ಕರೆಯದೆ ಓಬವ್ವ
ಇಡಿ ಇರುಳೆಲ್ಲ ನಿಂತು ಕೋಟೆಯ ಕಾದ ಕಥೆ
ತನ್ನ ಪತಿರಾಯಗೆ ಉಣಬಡಿಸಿ
ನೀರ ಬಿಂದಿಗೆ ಇರಿಸಿ ಸದ್ದಿಲ್ಲದೆ ನಡೆದ ಕಥೆ
ಆ ದುರ್ಗದ ಕೋಟೆಯಲಿ ನುಸುಳಿದ ವೈರಿಯ ಸದೆಬಡಿಯಲು
ಒಬ್ಬಳೆ ನಿಂತು ಬಿಟ್ಟಳು ಒನಕೆಯ ಹಿಡಿದೆಬಿಟ್ಟಳು
ಮದಕರಿ ಕೋಟೆಯ ಮಾನವ ಉಳಿಸೆಬಿಟ್ಟಳು
ಕನ್ನಡ ತಾಯಿಯ ಎದೆಹಾಲಿನ ಋಣ ತೀರಿಸೆಬಿಟ್ಟಳು
||“ಕ”ಎಂದವರಿಗೆ ಕರುಣೆಯನು
“ನ್ನ”ಎಂದವರಿಗೆ ನಲ್ಮೆಯನು
“ಡ” ಎಂದವರಿಗೆ ಡಮರುಗ ಬಾರಿಸಿ
ಶಾಂತಿಯ ಸಾರುವ ಕನ್ನಡ ನಾಡಿದು||
-
ಬೆಳಗಲಿ ಕನ್ನಡ ಜ್ಯೋತಿ
ಬೆಳಗಲಿ ಕನ್ನಡ ಪ್ರೀತಿ
ಹೃದಯಗಳ ಹಣತೆಗಳಲಿ
ನಾಡಭಕುತಿಯ ತೈಲವಿರಿಸಿ
ಬೆಳಗಲಿ ಕನ್ನಡ ಜ್ಯೋತಿ
ಬೆಳಗಲಿ ಕನ್ನಡ ಪ್ರೀತಿ
“ಕ”ಎಂದವರಿಗೆ ಕರುಣೆಯನು
“ನ್ನ”ಎಂದವರಿಗೆ ನಲ್ಮೆಯನು
“ಡ” ಎಂದವರಿಗೆ ಡಮರುಗ ಬಾರಿಸಿ
ಶಾಂತಿಯ ಸಾರುವ ಕನ್ನಡ ನಾಡಿದು
“ಅ” ಎಂದವರಿಗೆ ಅನ್ನವನು
“ಅಂ,ಅಃ”ಎಂದವರಿಗೆ ನೆರಳನ್ನು
ನಿತ್ಯ ನೀಡುವ ಸತ್ಯವಂತರ
ಪ್ರೀತಿಯ ಸಾರುವ ಕನ್ನಡ ನಾಡಿದು
ನಮ್ಮ ನಾಡಿಗೆ ಕವಿಋಷಿ ಪುಂಗವರ ಚರಿತೆ ಇದೆ
ಕರುನಾಡಿಗೆ ಜಗಜ್ಯೋಗಿ ಜಂಗಮರ ಹರಕೆ ಇದೆ
ಸಾವಿರ ವರ್ಷದ ಗೋವಿನ ಹಾಡಿದೆ ಮಣ್ಣ ಒಳಗೆ
ಕೈಗಳ ಮುಗಿದು ಕಾಲ್ಗಳ ತೊಳೆಯಿರಿ ಭುವನೇಶ್ವರಿಗೆ
||“ಕ”ಎಂದವರಿಗೆ ಕರುಣೆಯನು
“ನ್ನ”ಎಂದವರಿಗೆ ನಲ್ಮೆಯನು
“ಡ” ಎಂದವರಿಗೆ ಡಮರುಗ ಬಾರಿಸಿ
ಶಾಂತಿಯ ಸಾರುವ ಕನ್ನಡ ನಾಡಿದು||
ಆಹಹಹ
ಇದು ಶ್ರೀಗಂಧ ತುಂಬಿದ ನಾಡು
ಆಹಹಹ
ಇಲ್ಲಿ ಪ್ರಾಣಿಪಕ್ಷಿ ಮರಗಿಡವು
ಸವಿಗನ್ನಡ ಕಲಿವುದು ನೋಡು
ಓ ನಿಸರ್ಗದೇವಿ ಓಓ ನೀರೆರೆಯುತ್ತಾಳೆ
ಈ ನೆಲದ ಬನಸಿರಿಗೆ ದಿನವೂ ಚೆಂದ ಆನಂದ
ಈ ಕನ್ನಡ ನೆಲದ ಸಿರಿ ಶ್ರೀಗಂಧ
ದಸರ ಇದು ದಸರ
ಮೈಸೂರ ಒಡೆಯರ ವೈಭವವಿದೆ
ಅಂಬಾರಿ ಮೇಲೆ
ಅಂಬಾರಿ ಮೇಲೆ
ವಿಜಯ ದುಂದುಭಿಯ ಶುಭ ಕಹಳೆ ಕೂಗು ನೋಡು
ಅರಮನೆ ಮೇಲೆ
ಅರಮನೆ ಮೇಲೆ
ಭವ್ಯ ಇಲ್ಲಿನ ಪರಂಪರೆ ನವರಾತ್ರಿ ಬೆಳಕಿಗೆ ಲೋಕವೆ ಸೆರೆ
ಇದು ಕಣ್ಣಿಗೆ ಹಬ್ಬ ಆಆ
ಕರುನಾಡಿಗೆ ಹಬ್ಬ ಓಓ
ಜಗಮಗಿಸುವ ಜಗವೆಲ್ಲ ಮೆರೆಸುವ ದಸರ ಹಬ್ಬ
ದಸರ ಹಬ್ಬ ಎಂತ ಚೆಂದ ನೋಡು ನಮ್ಮ ನಾಡಿನ ಸಡಗರ
ಕಲಕಲ ಹರಿವಳು ಕಾವೇರಿ ನಮ್ಮ ಕಾವೇರಿ
ನಮ್ಮ ನಾಡಿಗೆ ಜೀವಜಲ ಇವಳು
ದುಡಿಯುವ ರೈತರ ಬೆವರಲ್ಲಿ ದಿನ ಮನೆಯುಟ್ಟು
ಬೆಳೆಯಾಗಿ ಬರುತಾಳೆ ಇವಳು
ಈ ಕೊಡಗಲ್ಲಿದೆ ಕಾವೇರಮ್ಮನ ತವರುಮನೆ
ಬೇಡೊ ಕೈಯ್ಯಿಗೆ ಬಾಗಿನ ಕೊಡುವಳು ಮನೆಮನೆಮನೆ
ಹೇ ಹೇ ಏನಿದು ಏನಿದು ಕರಾವಳಿ ಕರಾವಳಿ
ಕನ್ನಡ ತಾಯಿಗೆ ಕಡಿನ ಮುತ್ತಿನಲೆ ಪೋಣಿಸುತಿರುವಳು
ಪ್ರಭಾವಳಿ
ಅಲೆಅಲೆಗು ಕನ್ನಡದ ಕಲರವ ಚೆಲ್ಲೊ ಗುಣವು ಇದೆ
ಆಹಹಹಹ
ಓಓಓಓಓ
ಅರೆರೆರೆರೆ ಇದು ತಾನೆ ನಾಡಿನ ದೀವಳಿ
ರನ್ನ ಜನ್ನ ರಾಘವಾಂಕರ ನಾಡಿದು
ಎಂಟನೆ ಜ್ಞಾನಪೀಠಕು ಲಗ್ಗೆ ಇಟ್ಟಿರೊ ಕವಿನೆಲವಿದು
ದಾಸಶರಣ ಸರ್ವಜ್ಞರ ನಾಡಿದು
ಭೇದದ ಪದವಿಲ್ಲದ ನಾದದ ಜಾನಪದವಿದು
ಕರ್ನಾಟ ದೇಶಕ್ಕೆ ಇಂತ ನೂರಾರು ನವಿಲುಗರಿ
ಕಾವ್ಯಕಲೆಗಳಿಗೆ ಕರುನಾಡೆ ಮೇಲುಗಿರಿ
ಅರೆರೆರೆರೆ ಶಿಲ್ಪಕಲೆ ಓ ಜಕಣನ ಉಳಿಯನು ನೆನಪಿಸಿ ಉಳಿದಿರೊ ಬೇಲೂರು
ಅರೆರೆರೆರೆ ನಾಟ್ಯಕಲೆ ಐಹೊಳೆ ಬಾದಾಮಿ ಪಟ್ಟದಕಲ್ಲಿನ ದರಬಾರು
ಶಿಲೆಯ ಈ ಕೆತ್ತನೆಗೆ ಕಲೆಯ ಈ ಬಿತ್ತನೆಗೆ
ಯುಗಗಳು ಕಳೆದರು ಹೊಸತನ ಉಂಟು ಕನ್ನಡದಾಣೆ
ಕನ್ನಡತಿ ಮುಕುಟಕೆ ಇದೆ ಒಂದು ಕಾಣಿಕೆ
ಏ ಇದು ಹುಬ್ಬಳ್ಳಿ ಅಲ್ಲ ಹೂಬಳ್ಳಿ
ಜಟ್ಟಿಮಲ್ಲರಿಗೆ ಇದು ಗಟ್ಟಿನೆಲ ನೋಡು
ಅರೆ ಓ ಇತ್ತ ಧಾರವಾಡ ಧಾರಾಳವಾಡ
ಇದು ಉತ್ತರಾದಿ ಸಂಗೀತದ ನೆಲೆಬೀಡು
ಅತ್ತ ಚೆನ್ನಮ್ಮನೂರು ವೀರ ಕಥೆಗಳು ನೂರು
ಆ ಆಂಗ್ಲರ ಕಿತ್ತೊಗೆದ ವೀರವನಿತೆಯ ಕಿತ್ತೂರು
ನಮ್ಮ ಕನ್ನಡನಾಡಿನ ಹೆಮ್ಮೆಯ ಪುಟಗಳು ನೂರಾರು
ಪ್ರತಿ ಪುಟದಲು ಕರಪುಟವಿತ್ತ ವೀರರು ಸಾವಿರಾರು
ಕರ್ನಾಟ ದೇಶದ ಕೆಚ್ಚೆದೆ ಕಲಿಗಳ ಸಾಟಿಯಿಲ್ಲ ಯಾರು
ಯಾರನ್ನು ಕರೆಯದೆ ಓಬವ್ವ
ಇಡಿ ಇರುಳೆಲ್ಲ ನಿಂತು ಕೋಟೆಯ ಕಾದ ಕಥೆ
ತನ್ನ ಪತಿರಾಯಗೆ ಉಣಬಡಿಸಿ
ನೀರ ಬಿಂದಿಗೆ ಇರಿಸಿ ಸದ್ದಿಲ್ಲದೆ ನಡೆದ ಕಥೆ
ಆ ದುರ್ಗದ ಕೋಟೆಯಲಿ ನುಸುಳಿದ ವೈರಿಯ ಸದೆಬಡಿಯಲು
ಒಬ್ಬಳೆ ನಿಂತು ಬಿಟ್ಟಳು ಒನಕೆಯ ಹಿಡಿದೆಬಿಟ್ಟಳು
ಮದಕರಿ ಕೋಟೆಯ ಮಾನವ ಉಳಿಸೆಬಿಟ್ಟಳು
ಕನ್ನಡ ತಾಯಿಯ ಎದೆಹಾಲಿನ ಋಣ ತೀರಿಸೆಬಿಟ್ಟಳು
||“ಕ”ಎಂದವರಿಗೆ ಕರುಣೆಯನು
“ನ್ನ”ಎಂದವರಿಗೆ ನಲ್ಮೆಯನು
“ಡ” ಎಂದವರಿಗೆ ಡಮರುಗ ಬಾರಿಸಿ
ಶಾಂತಿಯ ಸಾರುವ ಕನ್ನಡ ನಾಡಿದು||