-
ಕೇಳು ಕೇಳವ್ವ ಕೇಳವ್ವ
ಗೊರವಂಕ ಕೇಳೆ ಒಂದು ಹಾಡ
ಎಲ್ಲ ಬಲ್ಲನೊ ಸಿದ್ದಯ್ಯ
ಸಿದ್ದಲಿಂಗಸ್ವಾಮಿ ನಮ್ಮ ಹಾಡ
ನಾರಿನಾಗೆ ಹೂವ ಕಟ್ಟು
ನೀರಿನಾಗೆ ಅಣೆ ಕಟ್ಟು
ನಾಲ್ಗೆಲೊಂದು ನುಡಿಕಟ್ಟು
ನೋಟದಾಗೆ ಮೋಡಿಕಟ್ಟು
ಕಲ್ಲು ಮಾತಾಡೊ ಹಂಗೆ ಹೆಸರು ಕಟ್ಟೋ…
||ಕೇಳು ಕೇಳವ್ವ ಕೇಳವ್ವ
ಗೊರವಂಕ ಕೇಳೆ ಒಂದು ಹಾಡ||
ಯಡಿಯೂರ ಮೂಡಣದಾಗೆ
ಮಾರ್ಕೋನಹಳ್ಳಿಯ ಒಳಗೆ
ಅಣೆಕಟ್ಟ ಕಟ್ಟಕ್ ಬಂದ್ರು ವಿಶ್ವೇಶ್ವರಯ್ಯ
ವಿಶ್ವೇಶ್ವರಯ್ಯ ಬಂದರೊ ಮೈಸೂರ ದೇಶ
ಮಂತ್ರಿ ಕೂಡೆ
ಅರಮನೆ ಮಂತ್ರಿ ಕುವರಿ ಚೆಲುವಾಂಬ ಬಂದ್ಲು
ಊರ ನೋಡೆ
ಊರಿಗೊಬ್ಬ ಮುತ್ತುಸ್ವಾಮಿಯ ಕೆತ್ತನೆಯ ನೋಡಿದಳು
ಮೆಚ್ಚಿಕೊಂಡು ಮಾತನಾಡಿ ಆದರವ ತೋರಿದಳು
ತಾನಿ ತಂದಾನತಾನೊ ತಂದನಾನೊ…..
ಮೈಸೂರ ಒಡೆಯರು ಬಂದು ಅಣೆಕಟ್ಟ ತ್ಯೆರೆದ ಮ್ಯಾಲು
ಚೆಲುವಾಂಬೆ ಮುತ್ತುಸ್ವಾಮಿ ಸ್ನೇಹ ಬೆಳೆದೋಯ್ತಣ್ಣ
ಎಂಥ ಮೋಹವು ಹುಟ್ಟಿತೊ
ಮನಸ್ಸುಗಳೆರಡು ಸೇರೋಹಂಗೆ
ಎಂಥ ಆನಂದ ಮೂಡಿತೊ
ಮಿಂಚಂತೆ ಅವರ ಕಣ್ಣಮ್ಯಾಗೆ
ಹೂವನ್ನ ಬಚ್ಚಿಡಬಹುದು ಕಂಪನ್ನ ಬಚ್ಚಿಡಬಹುದೆ
ಉಸಿರನ್ನ ಹಿಡಿದಿಟ್ಕೊಂಡ್ರು ಗಾಳಿಯ ಕಟ್ಟಿಡಬಹುದೆ
ಅರಮನೆ ಮಂತ್ರಿ ಕಣ್ಣಿಗೆ ಸಂಶಯ ಹುಳಬಿದ್ದಿತ್ತಲ್ಲೋ
ಎಲ್ಲೊ ಎಡವಟ್ಟು ಕಂಡಿತ್ತೊ
ಉಡ ಬೆಳೆದು ಹೆಬ್ಬುಲಿ ಆಯಿತಲ್ಲೋ
ಬಿಚ್ಚಿದಳು ಮಲ್ಲೆಬಾಲೆ ಹೊಡಿದಳು ಕುದುರೆ ಮ್ಯಾಲೆ
ಸೂಜಿಗಲ್ಲ ಮೋಹಮಾಲೆ ಮಾಯಗಾರನಾಡೊ ಲೀಲೆ
ಜವರಾಯ ದುತರಂತೋರು ಕುದುರೆಯ ಮ್ಯಾಲೆ ಏರಿ ಬಂದರೊ
ಆಕಾಶಗಂಗೆ ಭೂಮಿಗೆ ಧುಮುಕ್ಕಿ ಹರಿದು ಉಕ್ಕಿಬಂದಳೊ
ಎಲ್ಲಿ ಹೋದೆವು ಹೇಗೆ ಉಳಿದೆವು
ದಾರಿ ತೋರದೆ ಹೊಡಿದರು
ಯಾವ ದೈವವು ಕಾಯಲಿಲ್ಲವೊ
ಕೈ ನೀಡಲಿಲ್ಲವೊ ನೋಡಿರೊ
ಮಂಗಳದ ಮಂದಹಾಸವೆ ಗುರುಸಿದ್ದಯ್ಯನೆ
ಅಂಧಕಾರ ಆಗಿಹೋಯ್ತಲ್ಲೊ
ಜೋಡಿಜೀವ ಸೇರೊ ಕಾಲಕ್ಕೆ
ಕಾಲಭೈರವನೆ ಕಾಲದೊಳಗೆ ಸೇರಿ ಹೋದರೊ
-
ಕೇಳು ಕೇಳವ್ವ ಕೇಳವ್ವ
ಗೊರವಂಕ ಕೇಳೆ ಒಂದು ಹಾಡ
ಎಲ್ಲ ಬಲ್ಲನೊ ಸಿದ್ದಯ್ಯ
ಸಿದ್ದಲಿಂಗಸ್ವಾಮಿ ನಮ್ಮ ಹಾಡ
ನಾರಿನಾಗೆ ಹೂವ ಕಟ್ಟು
ನೀರಿನಾಗೆ ಅಣೆ ಕಟ್ಟು
ನಾಲ್ಗೆಲೊಂದು ನುಡಿಕಟ್ಟು
ನೋಟದಾಗೆ ಮೋಡಿಕಟ್ಟು
ಕಲ್ಲು ಮಾತಾಡೊ ಹಂಗೆ ಹೆಸರು ಕಟ್ಟೋ…
||ಕೇಳು ಕೇಳವ್ವ ಕೇಳವ್ವ
ಗೊರವಂಕ ಕೇಳೆ ಒಂದು ಹಾಡ||
ಯಡಿಯೂರ ಮೂಡಣದಾಗೆ
ಮಾರ್ಕೋನಹಳ್ಳಿಯ ಒಳಗೆ
ಅಣೆಕಟ್ಟ ಕಟ್ಟಕ್ ಬಂದ್ರು ವಿಶ್ವೇಶ್ವರಯ್ಯ
ವಿಶ್ವೇಶ್ವರಯ್ಯ ಬಂದರೊ ಮೈಸೂರ ದೇಶ
ಮಂತ್ರಿ ಕೂಡೆ
ಅರಮನೆ ಮಂತ್ರಿ ಕುವರಿ ಚೆಲುವಾಂಬ ಬಂದ್ಲು
ಊರ ನೋಡೆ
ಊರಿಗೊಬ್ಬ ಮುತ್ತುಸ್ವಾಮಿಯ ಕೆತ್ತನೆಯ ನೋಡಿದಳು
ಮೆಚ್ಚಿಕೊಂಡು ಮಾತನಾಡಿ ಆದರವ ತೋರಿದಳು
ತಾನಿ ತಂದಾನತಾನೊ ತಂದನಾನೊ…..
ಮೈಸೂರ ಒಡೆಯರು ಬಂದು ಅಣೆಕಟ್ಟ ತ್ಯೆರೆದ ಮ್ಯಾಲು
ಚೆಲುವಾಂಬೆ ಮುತ್ತುಸ್ವಾಮಿ ಸ್ನೇಹ ಬೆಳೆದೋಯ್ತಣ್ಣ
ಎಂಥ ಮೋಹವು ಹುಟ್ಟಿತೊ
ಮನಸ್ಸುಗಳೆರಡು ಸೇರೋಹಂಗೆ
ಎಂಥ ಆನಂದ ಮೂಡಿತೊ
ಮಿಂಚಂತೆ ಅವರ ಕಣ್ಣಮ್ಯಾಗೆ
ಹೂವನ್ನ ಬಚ್ಚಿಡಬಹುದು ಕಂಪನ್ನ ಬಚ್ಚಿಡಬಹುದೆ
ಉಸಿರನ್ನ ಹಿಡಿದಿಟ್ಕೊಂಡ್ರು ಗಾಳಿಯ ಕಟ್ಟಿಡಬಹುದೆ
ಅರಮನೆ ಮಂತ್ರಿ ಕಣ್ಣಿಗೆ ಸಂಶಯ ಹುಳಬಿದ್ದಿತ್ತಲ್ಲೋ
ಎಲ್ಲೊ ಎಡವಟ್ಟು ಕಂಡಿತ್ತೊ
ಉಡ ಬೆಳೆದು ಹೆಬ್ಬುಲಿ ಆಯಿತಲ್ಲೋ
ಬಿಚ್ಚಿದಳು ಮಲ್ಲೆಬಾಲೆ ಹೊಡಿದಳು ಕುದುರೆ ಮ್ಯಾಲೆ
ಸೂಜಿಗಲ್ಲ ಮೋಹಮಾಲೆ ಮಾಯಗಾರನಾಡೊ ಲೀಲೆ
ಜವರಾಯ ದುತರಂತೋರು ಕುದುರೆಯ ಮ್ಯಾಲೆ ಏರಿ ಬಂದರೊ
ಆಕಾಶಗಂಗೆ ಭೂಮಿಗೆ ಧುಮುಕ್ಕಿ ಹರಿದು ಉಕ್ಕಿಬಂದಳೊ
ಎಲ್ಲಿ ಹೋದೆವು ಹೇಗೆ ಉಳಿದೆವು
ದಾರಿ ತೋರದೆ ಹೊಡಿದರು
ಯಾವ ದೈವವು ಕಾಯಲಿಲ್ಲವೊ
ಕೈ ನೀಡಲಿಲ್ಲವೊ ನೋಡಿರೊ
ಮಂಗಳದ ಮಂದಹಾಸವೆ ಗುರುಸಿದ್ದಯ್ಯನೆ
ಅಂಧಕಾರ ಆಗಿಹೋಯ್ತಲ್ಲೊ
ಜೋಡಿಜೀವ ಸೇರೊ ಕಾಲಕ್ಕೆ
ಕಾಲಭೈರವನೆ ಕಾಲದೊಳಗೆ ಸೇರಿ ಹೋದರೊ