-
ಅಯ್ಯನೆ ಆದ್ಯಂತನೆ ಅಖಿಲೇಶನೆ ಅಯ್ಯಪ್ಪನೆ
ಕೇಳೊ ಹಂಬಲ ನೀಡೊ ಬೆಂಬಲ
ಹರಿಹರ ಹರಿಹರ ಹರಿಹರನೆ
ಭಕುತರ ಭವಭಯಹರ ಪರಿಹರನೆ
ಅಯ್ಯನೆ ಅಪ್ಪನೆ ಶರಣು ಎಂದು
ಬಂದ ಮೇಲು ಶೋಧನೆಯೆ
ಅಯ್ಯನೆ ಅಪ್ಪನೆ ನೀನೆ ವೇದ
ಅಂದ ಮೇಲು ವೇದನೆಯೆ
ಏಕೆ ಈ ಸಿಡಿಲು ನನ್ನೀ ಬಾಳಿಗೆ
ಏಕೆ ಈ ಕವಲು ನಮ್ಮಿ ದಾರಿಗೆ
ಯಾವದೋಷವಿದೆ ದೂಷಿಯ ಮಾಡಿದೆ
ಅರ್ಪಿಸಿದೆ ಸನ್ನಿಧಿಗೆ ಆತ್ಮದ ತೋರಣ
ಅರ್ಪಿಸಿದೆ ಸನ್ನಿಧಿಗೆ ಆತ್ಮದ ತೋರಣ
ಆದರೂ ಕಾಣಿಸದೆ ಅರ್ಥಪರಾಯಣ
ಆದರೂ ಕಾಣಿಸದೆ ಅರ್ಥಪರಾಯಣ
ಅಯ್ಯನೆ ಅಪ್ಪನೆ ಶರಣು ಎಂದು
ಬಂದ ಮೇಲು ಶೋಧನೆಯೆ
ಮಹಿಷಿಯ ಮದವನು ವಧಿಸಿದ ಮೋಹನ
ಮಣಿಕಂಠಸ್ವಾಮಿಯು ನೀನೆ
ಚಿನ್ನದ ಚಿನ್ಮಯಿ ನಿನ್ನ ವಿನಹ
ಚಿನ್ನವನು ನಾ ಕಾಣೆ
ಹೆಬ್ಬುಲಿ ಹಾಲನು ಬೊಗಸೆಯಲಿಡಿದು
ತಿದ್ದಿದೆ ತಾಯಿಯೆ ಬುದ್ದಿ
ಕಪಟವನರಿಯೆ ಕಲ್ಪಾಂತವೈರವ
ಕೊಡು ಬಾ ಬದುಕಿಗೆ ಸಿದ್ದಿ
ಮಿಥ್ಯ ಬ್ರಹ್ಮಚಾರಿ ಆದರು ನೀ
ಅಯ್ಯನೆನ್ನುವುದು ಈ ಧರಣಿ
ಕಣ್ಣಲ್ಲಿ ತುಂಬಿದ ಶಕ್ತಿಯೆ
ಕಣ್ಣನು ಚುಚ್ಚುವ ಕತ್ತಿಯೆ
ಮಣ್ಣಲಿ ಬೊಂಬೆಯ ಮಾಡಿದ ಮನಸಿಗೆ
ನಿಂದನೆ ತಂದೆ
ನಿನ್ನ ಸ್ವರೂಪವ ತೋರಿದ ಮನಸ್ಸಿಗೆ
ನೋವನು ನೀನು ತಂದೆ
ಅಯ್ಯನೆ ಅಪ್ಪನೆ ಅಮರನೆ
ಅಖಿಲನೆ ಅಗ್ರನೆ ಅಯ್ಯಪ್ಪನೆ
-
ಅಯ್ಯನೆ ಆದ್ಯಂತನೆ ಅಖಿಲೇಶನೆ ಅಯ್ಯಪ್ಪನೆ
ಕೇಳೊ ಹಂಬಲ ನೀಡೊ ಬೆಂಬಲ
ಹರಿಹರ ಹರಿಹರ ಹರಿಹರನೆ
ಭಕುತರ ಭವಭಯಹರ ಪರಿಹರನೆ
ಅಯ್ಯನೆ ಅಪ್ಪನೆ ಶರಣು ಎಂದು
ಬಂದ ಮೇಲು ಶೋಧನೆಯೆ
ಅಯ್ಯನೆ ಅಪ್ಪನೆ ನೀನೆ ವೇದ
ಅಂದ ಮೇಲು ವೇದನೆಯೆ
ಏಕೆ ಈ ಸಿಡಿಲು ನನ್ನೀ ಬಾಳಿಗೆ
ಏಕೆ ಈ ಕವಲು ನಮ್ಮಿ ದಾರಿಗೆ
ಯಾವದೋಷವಿದೆ ದೂಷಿಯ ಮಾಡಿದೆ
ಅರ್ಪಿಸಿದೆ ಸನ್ನಿಧಿಗೆ ಆತ್ಮದ ತೋರಣ
ಅರ್ಪಿಸಿದೆ ಸನ್ನಿಧಿಗೆ ಆತ್ಮದ ತೋರಣ
ಆದರೂ ಕಾಣಿಸದೆ ಅರ್ಥಪರಾಯಣ
ಆದರೂ ಕಾಣಿಸದೆ ಅರ್ಥಪರಾಯಣ
ಅಯ್ಯನೆ ಅಪ್ಪನೆ ಶರಣು ಎಂದು
ಬಂದ ಮೇಲು ಶೋಧನೆಯೆ
ಮಹಿಷಿಯ ಮದವನು ವಧಿಸಿದ ಮೋಹನ
ಮಣಿಕಂಠಸ್ವಾಮಿಯು ನೀನೆ
ಚಿನ್ನದ ಚಿನ್ಮಯಿ ನಿನ್ನ ವಿನಹ
ಚಿನ್ನವನು ನಾ ಕಾಣೆ
ಹೆಬ್ಬುಲಿ ಹಾಲನು ಬೊಗಸೆಯಲಿಡಿದು
ತಿದ್ದಿದೆ ತಾಯಿಯೆ ಬುದ್ದಿ
ಕಪಟವನರಿಯೆ ಕಲ್ಪಾಂತವೈರವ
ಕೊಡು ಬಾ ಬದುಕಿಗೆ ಸಿದ್ದಿ
ಮಿಥ್ಯ ಬ್ರಹ್ಮಚಾರಿ ಆದರು ನೀ
ಅಯ್ಯನೆನ್ನುವುದು ಈ ಧರಣಿ
ಕಣ್ಣಲ್ಲಿ ತುಂಬಿದ ಶಕ್ತಿಯೆ
ಕಣ್ಣನು ಚುಚ್ಚುವ ಕತ್ತಿಯೆ
ಮಣ್ಣಲಿ ಬೊಂಬೆಯ ಮಾಡಿದ ಮನಸಿಗೆ
ನಿಂದನೆ ತಂದೆ
ನಿನ್ನ ಸ್ವರೂಪವ ತೋರಿದ ಮನಸ್ಸಿಗೆ
ನೋವನು ನೀನು ತಂದೆ
ಅಯ್ಯನೆ ಅಪ್ಪನೆ ಅಮರನೆ
ಅಖಿಲನೆ ಅಗ್ರನೆ ಅಯ್ಯಪ್ಪನೆ