ನಿತ್ಯ ಹರಿದ್ವರ್ಣದ
ಕಾನನದ ಮಧ್ಯದಲ್ಲಿ
ನೆಲೆಸಿರುವವಳೆ ತಾಯೆ
ನಿತ್ಯಾನ್ನದಾತೆ
ಬೇಡಿಬಂದ ಭಕ್ತರ
ದುರಿತಗಳ ಕಳೆವವಳೆ
ಶ್ರೀ ಬ್ರಾಹ್ಮೀದುರ್ಗಾಪರಮೇಶ್ವರಿ ಮಾತೆ
ಅಮ್ಮಾ…
ಶ್ರೀ ಬ್ರಾಹ್ಮೀದುರ್ಗಾಪರಮೇಶ್ವರಿ ಮಾತೆ
ನಿನ್ನ ಪಾದದಿ ಎನ್ನ ಮನಸ್ಸನ್ನು ಅರ್ಪಿಸಿದೆ
ಅಭಯ ನೀಡಿ ಕಾಯಮ್ಮ ಮಂಗಳದಾತೆ
ವರುಷಕೊಮ್ಮೆ ನಿನ್ನ ಪಾದ
ತೊಳೆವ ಪುಣ್ಯ ಪಡೆದ ಆ ನದಿಯೇ
ಗಂಗೆಗಿಂತ ಪಾವನವಂತೆ
ದೊರಕಲ್ಲಮ್ಮ ಎಲ್ಲರಿಗೂ ನಿನ್ನ ದಿವ್ಯದರುಶನ
ತಿಳಿಯಾಗಿರಲಿ ತಾಯೆ ಜಗದ ಎಲ್ಲರ ಮನ
ಕಾತ್ಯಾಯಿನಿಯೇ ನಿನ್ನ
ಕುಂಕುಮಾರ್ಚನೆಯ ಪ್ರಸಾದ
ಕಾತ್ಯಾಯಿನಿಯೇ ನಿನ್ನ
ಕುಂಕುಮಾರ್ಚನೆಯ ಪ್ರಸಾದ
ಮೊಳಗುತ್ತದೆ ಎಲ್ಲೆಲ್ಲೂ ಓಂಕಾರ ನಾದ
ಓಂಕಾರ ನಾದ
ನಿತ್ಯ ಹರಿದ್ವರ್ಣದ
ಕಾನನದ ಮಧ್ಯದಲ್ಲಿ
ನೆಲೆಸಿರುವವಳೆ ತಾಯೆ
ನಿತ್ಯಾನ್ನದಾತೆ
ಬೇಡಿಬಂದ ಭಕ್ತರ
ದುರಿತಗಳ ಕಳೆವವಳೆ
ಶ್ರೀ ಬ್ರಾಹ್ಮೀದುರ್ಗಾಪರಮೇಶ್ವರಿ ಮಾತೆ
ಅಮ್ಮಾ…
ಶ್ರೀ ಬ್ರಾಹ್ಮೀದುರ್ಗಾಪರಮೇಶ್ವರಿ ಮಾತೆ
ನಿನ್ನ ಪಾದದಿ ಎನ್ನ ಮನಸ್ಸನ್ನು ಅರ್ಪಿಸಿದೆ
ಅಭಯ ನೀಡಿ ಕಾಯಮ್ಮ ಮಂಗಳದಾತೆ
ವರುಷಕೊಮ್ಮೆ ನಿನ್ನ ಪಾದ
ತೊಳೆವ ಪುಣ್ಯ ಪಡೆದ ಆ ನದಿಯೇ
ಗಂಗೆಗಿಂತ ಪಾವನವಂತೆ
ದೊರಕಲ್ಲಮ್ಮ ಎಲ್ಲರಿಗೂ ನಿನ್ನ ದಿವ್ಯದರುಶನ
ತಿಳಿಯಾಗಿರಲಿ ತಾಯೆ ಜಗದ ಎಲ್ಲರ ಮನ
ಕಾತ್ಯಾಯಿನಿಯೇ ನಿನ್ನ
ಕುಂಕುಮಾರ್ಚನೆಯ ಪ್ರಸಾದ
ಕಾತ್ಯಾಯಿನಿಯೇ ನಿನ್ನ
ಕುಂಕುಮಾರ್ಚನೆಯ ಪ್ರಸಾದ
ಮೊಳಗುತ್ತದೆ ಎಲ್ಲೆಲ್ಲೂ ಓಂಕಾರ ನಾದ
ಓಂಕಾರ ನಾದ