ಎನ್ನ ಭಿನ್ನಪ ಕೇಳು ಧನ್ವಂತ್ರಿ ದಯಮಾಡು
ಸಣ್ಣವನು ಇವ ಕೇವಲ
ಎನ್ನ ಭಿನ್ನಪ ಕೇಳು ಧನ್ವಂತ್ರಿ ದಯಮಾಡು
ಸಣ್ಣವನು ಇವ ಕೇವಲ
ಬನ್ನಬಡಿಸುವ ರೋಗವನ್ನು ಮೋಚನೆ ಮಾಡಿ
ಚೆನ್ನಾಗಿ ಪಾಲಿಸುವುದು ಕರುಣಿ
ಚೆನ್ನಾಗಿ ಪಾಲಿಸುವುದು
ಎನ್ನ ಭಿನ್ನಪ ಕೇಳು ಧನ್ವಂತ್ರಿ ದಯಮಾಡು
ಸಣ್ಣವನು ಇವ ಕೇವಲ
ಸಣ್ಣವನು ಇವ ಕೇವಲ
ಆರೋಗ್ಯ ಆಯುಷ್ಯ ಐಶ್ವರ್ಯವೆಂಬುವಿವು
ಈ ಮೂರು ವಿಧ ವಸ್ತುಂಗಳು
ನಾರಾಯಣನ ಭಜಕರಾದವರ ಸಾಧನಕೆ
ಪೂರಕವಾಗಿಪ್ಪುವು
ಘೋರ ವ್ಯಭಿಚಾರ ಪರನಿಂದೆ
ಪರ ವಿತ್ತಾಪಹಾರ ಮಾಡಿದ ದೋಷದಿ
ದರಿದ್ರರಾಗುವರು ಮೂರು ವಿಧದಿಂದಲಿ
ಕಾರಣನು ನೀನೆ ದುಷ್ಕರ್ಮ ಪರಿಹರಿಸೊ
ಪರಿಹರಿಸೊ
||ಎನ್ನ ಭಿನ್ನಪ ಕೇಳು ಧನ್ವಂತ್ರಿ ದಯಮಾಡು
ಸಣ್ಣವನು ಇವ ಕೇವಲ ||
ಸಣ್ಣವನು ಇವ ಕೇವಲ
ವಸುಮತಿಯ ಮೇಲಿನ್ನು ಅಸುರ ಜನರೆ ಬಹಳ
ವಶವಲ್ಲ ಕಲಿಯ ಬಾಧೆ
ಬಿಸಿಲಿಂದ ಪೀಡಿತವಾದ ಸಸಿಗಳಂತೆ
ಶಿಶುಗಳು ನಾವಿಪ್ಪೆವು
ಅಸುರಾರಿ ನಿನ್ನ ಕರುಣಾಮೃತದ ಮಳೆಗರೆದು
ಕುಶಲದಿ ಪಾಲಿಸುವುದು
ಕೆಸರಿಂದ ಕೆಸರು ತೊಳೆದಂತೆ ಕರ್ಮದ ಪಥವು
ಅಸುನಾಥ ಹರಿಯೇ ಪೊರೆಯೋ ಸ್ವಾಮಿ
ಪೊರೆಯೋ ಸ್ವಾಮಿ
||ಎನ್ನ ಭಿನ್ನಪ ಕೇಳು ಧನ್ವಂತ್ರಿ ದಯಮಾಡು
ಸಣ್ಣವನು ಇವ ಕೇವಲ ||
ಸಣ್ಣವನು ಇವ ಕೇವಲ
ಅನ್ಯರನು ಭಜಿಸದಲೆ ನಿನ್ನನೆ ಸ್ತುತಿಸುತ
ನಿನ್ನ ಚಿಹ್ನೆಗಳ ಧರಿಸಿ
ನಿನ್ನವರನಿಸಿ ನಿನ್ನ ನಾಮೋಚ್ಚರಿಸಿ
ನಿನ್ನಿಂದ ಉಪಜೀವಿಸಿ
ಅನ್ನ ಆರೋಗ್ಯ ಅಲ್ಪವು ಹಾಗೆ
ಅನ್ಯರಿಗೆ ಇನ್ನು ಅಲ್ಪರಿಯಬೇಕೆ
ನಿನ್ನ ಸಂಕಲ್ಪ ಭಕುತರನು ಪೋಷಿಪನೆಂದು
ಘನ್ನ ಬಿರುದಿನ್ನು ಉಳುಹು ಸ್ವಾಮಿ ಉಳುಹು ಸ್ವಾಮಿ
||ಎನ್ನ ಭಿನ್ನಪ ಕೇಳು ಧನ್ವಂತ್ರಿ ದಯಮಾಡು
ಸಣ್ಣವನು ಇವ ಕೇವಲ ||
ಸಣ್ಣವನು ಇವ ಕೇವಲ
ಆದಿವ್ಯಾಧಿಗಳು ಉನ್ಮಾದ ವಿಭ್ರಮ
ನಾನಾ ಬಾಧೆಗೌಷಧವು ನೀನೆ
ಹೇ ದೇವ ನಿನ್ನ ಕರಕಲಶ ಸುಧೆತನು ಎರೆದು
ಸಾಧುಗಳ ಸಂತೈಸುವಿ
ಮೋದಬಡಿಸುವಿ ನಿನ್ನ ಸಾಧಿಸುವ ಜನಕ್ಕೆ
ಶುಭೋದಯಂಗಳನ್ನೆ ನೀಡಿ
ಆದರಿಸಿ ಇವಗೆ ತವಪಾದ ಧ್ಯಾನವನಿತ್ತು
ಸಾಧುಗಳೊಳಗಿರಿಸಿ ಮೋದಗುರು ಸರ್ವದ ಸರ್ವದ
||ಎನ್ನ ಭಿನ್ನಪ ಕೇಳು ಧನ್ವಂತ್ರಿ ದಯಮಾಡು
ಸಣ್ಣವನು ಇವ ಕೇವಲ ||
ಸಣ್ಣವನು ಇವ ಕೇವಲ
ನಿನ್ನವರಲಿ ಇವಗೆ ಇನ್ನು ರತಿಯನ್ನು ಕೊಡು
ನಿನ್ನವನೆಂದು ಅರಿಯೆ
ನಿನ್ನ ನಾ ಪ್ರಾರ್ಥಿಸಿದ ಅನ್ಯರಿಗೆ ಅಲ್ಪರಿಯೆ
ಎನ್ನ ಪಾಲಿಸುವ ದೊರೆಯೆ
ಎನ್ನ ಮಾತಲ್ಲವಿದು ಎನ್ನ ಹಿರಿಯರ ಮಾತು
ಮನ್ನಿಸಲಿಬೇಕು ಕರುಣಿ
ಉನ್ನಂತ ಗುಣಪೂರ್ಣ ಗೋಪಾಲವಿಠಲ
ಉನ್ನಂತ ಗುಣಪೂರ್ಣ ಗೋಪಾಲವಿಠಲ
ಇನ್ನಿದನೆ ಪಾಲಿಸುವುದು ಪ್ರಭುವೇ
ಪಾಲಿಸುವುದು ಪ್ರಭುವೇ
|| ಎನ್ನ ಭಿನ್ನಪ ಕೇಳು ಧನ್ವಂತ್ರಿ ದಯಮಾಡು
ಸಣ್ಣವನು ಇವ ಕೇವಲ
ಬನ್ನಬಡಿಸುವ ರೋಗವನ್ನು ಮೋಚನೆ ಮಾಡಿ
ಚೆನ್ನಾಗಿ ಪಾಲಿಸುವುದು ಕರುಣಿ
ಚೆನ್ನಾಗಿ ಪಾಲಿಸುವುದು||
ಚೆನ್ನಾಗಿ ಪಾಲಿಸುವುದು
ಚೆನ್ನಾಗಿ ಪಾಲಿಸುವುದು
ಚೆನ್ನಾಗಿ ಪಾಲಿಸುವುದು
ಎನ್ನ ಭಿನ್ನಪ ಕೇಳು ಧನ್ವಂತ್ರಿ ದಯಮಾಡು
ಸಣ್ಣವನು ಇವ ಕೇವಲ
ಎನ್ನ ಭಿನ್ನಪ ಕೇಳು ಧನ್ವಂತ್ರಿ ದಯಮಾಡು
ಸಣ್ಣವನು ಇವ ಕೇವಲ
ಬನ್ನಬಡಿಸುವ ರೋಗವನ್ನು ಮೋಚನೆ ಮಾಡಿ
ಚೆನ್ನಾಗಿ ಪಾಲಿಸುವುದು ಕರುಣಿ
ಚೆನ್ನಾಗಿ ಪಾಲಿಸುವುದು
ಎನ್ನ ಭಿನ್ನಪ ಕೇಳು ಧನ್ವಂತ್ರಿ ದಯಮಾಡು
ಸಣ್ಣವನು ಇವ ಕೇವಲ
ಸಣ್ಣವನು ಇವ ಕೇವಲ
ಆರೋಗ್ಯ ಆಯುಷ್ಯ ಐಶ್ವರ್ಯವೆಂಬುವಿವು
ಈ ಮೂರು ವಿಧ ವಸ್ತುಂಗಳು
ನಾರಾಯಣನ ಭಜಕರಾದವರ ಸಾಧನಕೆ
ಪೂರಕವಾಗಿಪ್ಪುವು
ಘೋರ ವ್ಯಭಿಚಾರ ಪರನಿಂದೆ
ಪರ ವಿತ್ತಾಪಹಾರ ಮಾಡಿದ ದೋಷದಿ
ದರಿದ್ರರಾಗುವರು ಮೂರು ವಿಧದಿಂದಲಿ
ಕಾರಣನು ನೀನೆ ದುಷ್ಕರ್ಮ ಪರಿಹರಿಸೊ
ಪರಿಹರಿಸೊ
||ಎನ್ನ ಭಿನ್ನಪ ಕೇಳು ಧನ್ವಂತ್ರಿ ದಯಮಾಡು
ಸಣ್ಣವನು ಇವ ಕೇವಲ ||
ಸಣ್ಣವನು ಇವ ಕೇವಲ
ವಸುಮತಿಯ ಮೇಲಿನ್ನು ಅಸುರ ಜನರೆ ಬಹಳ
ವಶವಲ್ಲ ಕಲಿಯ ಬಾಧೆ
ಬಿಸಿಲಿಂದ ಪೀಡಿತವಾದ ಸಸಿಗಳಂತೆ
ಶಿಶುಗಳು ನಾವಿಪ್ಪೆವು
ಅಸುರಾರಿ ನಿನ್ನ ಕರುಣಾಮೃತದ ಮಳೆಗರೆದು
ಕುಶಲದಿ ಪಾಲಿಸುವುದು
ಕೆಸರಿಂದ ಕೆಸರು ತೊಳೆದಂತೆ ಕರ್ಮದ ಪಥವು
ಅಸುನಾಥ ಹರಿಯೇ ಪೊರೆಯೋ ಸ್ವಾಮಿ
ಪೊರೆಯೋ ಸ್ವಾಮಿ
||ಎನ್ನ ಭಿನ್ನಪ ಕೇಳು ಧನ್ವಂತ್ರಿ ದಯಮಾಡು
ಸಣ್ಣವನು ಇವ ಕೇವಲ ||
ಸಣ್ಣವನು ಇವ ಕೇವಲ
ಅನ್ಯರನು ಭಜಿಸದಲೆ ನಿನ್ನನೆ ಸ್ತುತಿಸುತ
ನಿನ್ನ ಚಿಹ್ನೆಗಳ ಧರಿಸಿ
ನಿನ್ನವರನಿಸಿ ನಿನ್ನ ನಾಮೋಚ್ಚರಿಸಿ
ನಿನ್ನಿಂದ ಉಪಜೀವಿಸಿ
ಅನ್ನ ಆರೋಗ್ಯ ಅಲ್ಪವು ಹಾಗೆ
ಅನ್ಯರಿಗೆ ಇನ್ನು ಅಲ್ಪರಿಯಬೇಕೆ
ನಿನ್ನ ಸಂಕಲ್ಪ ಭಕುತರನು ಪೋಷಿಪನೆಂದು
ಘನ್ನ ಬಿರುದಿನ್ನು ಉಳುಹು ಸ್ವಾಮಿ ಉಳುಹು ಸ್ವಾಮಿ
||ಎನ್ನ ಭಿನ್ನಪ ಕೇಳು ಧನ್ವಂತ್ರಿ ದಯಮಾಡು
ಸಣ್ಣವನು ಇವ ಕೇವಲ ||
ಸಣ್ಣವನು ಇವ ಕೇವಲ
ಆದಿವ್ಯಾಧಿಗಳು ಉನ್ಮಾದ ವಿಭ್ರಮ
ನಾನಾ ಬಾಧೆಗೌಷಧವು ನೀನೆ
ಹೇ ದೇವ ನಿನ್ನ ಕರಕಲಶ ಸುಧೆತನು ಎರೆದು
ಸಾಧುಗಳ ಸಂತೈಸುವಿ
ಮೋದಬಡಿಸುವಿ ನಿನ್ನ ಸಾಧಿಸುವ ಜನಕ್ಕೆ
ಶುಭೋದಯಂಗಳನ್ನೆ ನೀಡಿ
ಆದರಿಸಿ ಇವಗೆ ತವಪಾದ ಧ್ಯಾನವನಿತ್ತು
ಸಾಧುಗಳೊಳಗಿರಿಸಿ ಮೋದಗುರು ಸರ್ವದ ಸರ್ವದ
||ಎನ್ನ ಭಿನ್ನಪ ಕೇಳು ಧನ್ವಂತ್ರಿ ದಯಮಾಡು
ಸಣ್ಣವನು ಇವ ಕೇವಲ ||
ಸಣ್ಣವನು ಇವ ಕೇವಲ
ನಿನ್ನವರಲಿ ಇವಗೆ ಇನ್ನು ರತಿಯನ್ನು ಕೊಡು
ನಿನ್ನವನೆಂದು ಅರಿಯೆ
ನಿನ್ನ ನಾ ಪ್ರಾರ್ಥಿಸಿದ ಅನ್ಯರಿಗೆ ಅಲ್ಪರಿಯೆ
ಎನ್ನ ಪಾಲಿಸುವ ದೊರೆಯೆ
ಎನ್ನ ಮಾತಲ್ಲವಿದು ಎನ್ನ ಹಿರಿಯರ ಮಾತು
ಮನ್ನಿಸಲಿಬೇಕು ಕರುಣಿ
ಉನ್ನಂತ ಗುಣಪೂರ್ಣ ಗೋಪಾಲವಿಠಲ
ಉನ್ನಂತ ಗುಣಪೂರ್ಣ ಗೋಪಾಲವಿಠಲ
ಇನ್ನಿದನೆ ಪಾಲಿಸುವುದು ಪ್ರಭುವೇ
ಪಾಲಿಸುವುದು ಪ್ರಭುವೇ
|| ಎನ್ನ ಭಿನ್ನಪ ಕೇಳು ಧನ್ವಂತ್ರಿ ದಯಮಾಡು
ಸಣ್ಣವನು ಇವ ಕೇವಲ
ಬನ್ನಬಡಿಸುವ ರೋಗವನ್ನು ಮೋಚನೆ ಮಾಡಿ
ಚೆನ್ನಾಗಿ ಪಾಲಿಸುವುದು ಕರುಣಿ
ಚೆನ್ನಾಗಿ ಪಾಲಿಸುವುದು||
ಚೆನ್ನಾಗಿ ಪಾಲಿಸುವುದು
ಚೆನ್ನಾಗಿ ಪಾಲಿಸುವುದು
ಚೆನ್ನಾಗಿ ಪಾಲಿಸುವುದು