ಈ ಮಾನವರೆಲ್ಲ ಒಂದೇ ಎನುವ
ಮಾನವೀಯತೆ ನುಡಿದು
ನವಭಾರತವನು ನಿರ್ಮಿಸಬೇಕಿದೆ
ತಾರತಮ್ಯ ತೊರೆದು…
ಏಕತೆಯನು ಮೆರೆದು….
ಏಕತೆಯನು ಮೆರೆದು….
|| ಈ ಮಾನವರೆಲ್ಲ ಒಂದೇ ಎನುವ
ಮಾನವೀಯತೆ ನುಡಿದು….||
ಸರ್ವ ಸಮಾಜವು ಸೇರಿ
ಸಂಕೋಲೆಗಳನು ಸೀಳಿ
ಸಂಕೋಲೆಗಳನು ಸೀಳಿ
ಮತ ಮೌಢ್ಯಗಳನು ಮೀರಿ
ಸಮತೆಯನು ತಿಳಿ ಹೇಳಿ
ಸಮತೆಯನು ತಿಳಿ ಹೇಳಿ
ಪ್ರಗತಿಯ ಕಡೆಗೆ ನಡೆ ಪ್ರತಿ ಘಳಿಗೆ
ಎಲ್ಲರೂ ಅಡಿಗಡಿಗೆ
ಇರುವೆವು ಮುನ್ನಡೆ ಸಲ್ಲೊಗುರಿಗೆ
ಜನ ಮನ ನಾಡಿ ನುಡಿಸುತ ಹಾಡಿ
ಜನ ಮನ ನಾಡಿ ನುಡಿಸುತ ಹಾಡಿ
ಸ್ವಾವಲಂಬಿಯಾಗಿ…
ಭವ್ಯ ಭಾರತದ ಪ್ರಜೆಯಾಗಿ
ಭಾರತ ದೇಶದ ಉಸಿರಾಗಿ ಹೆಸರಾಗಿ
|| ಈ ಮಾನವರೆಲ್ಲ ಒಂದೇ ಎನುವ
ಮಾನವೀಯತೆ ನುಡಿದು….||
ಶಾಂತಿ ಮಂತ್ರವ ಸಾರಿ
ದೇಶ ಭಕ್ತಿಯನು ತೋರಿ
ದೇಶ ಭಕ್ತಿಯನು ತೋರಿ
ದ್ವೇಷ ನಿನ್ನೊಳಗೆ ತೊರೆದು
ಪ್ರೀತಿ ಮಮತೆಯನು ಮೆರೆದು
ಪ್ರೀತಿ ಮಮತೆಯನು ಮೆರೆದು
ರೈತನೆ ಬಂಧು ಎನ್ನುತ ಇಂದು
ಸಾಗುವ ಜೊತೆ ಜೊತೆಗೆ
ರೈತನ ನಂಬಿದರೆ ಜೀವ ಕೊನೆವೆರೆಗೆ
ದೇಶಕೆ ಶಕ್ತಿಯು ತೋರಿಹ ಭಕ್ತಿಯು
ಅವನ ಬೆವರಲಿ ಮೆರೆದಿದೆ ದೇಶವು
ರೈತನಿಂದ ಹಸಿರು
ಅವನೇ ದೇಶದುಸಿರು
ಜೀವನಾಡಿಯಲಿ ಬೆರೆತಿರುವ…
ಹೆಸರು ಉಳಿಸಿರುವ…
|| ಈ ಮಾನವರೆಲ್ಲ ಒಂದೇ ಎನುವ
ಮಾನವೀಯತೆ ನುಡಿದು
ನವಭಾರತವನು ನಿರ್ಮಿಸಬೇಕಿದೆ
ತಾರತಮ್ಯ ತೊರೆದು…
ಏಕತೆಯನು ಮೆರೆದು….
ಏಕತೆಯನು ಮೆರೆದು….
ಈ ಮಾನವರೆಲ್ಲ ಒಂದೇ ಎನುವ
ಮಾನವೀಯತೆ ನುಡಿದು…..||
ಈ ಮಾನವರೆಲ್ಲ ಒಂದೇ ಎನುವ
ಮಾನವೀಯತೆ ನುಡಿದು
ನವಭಾರತವನು ನಿರ್ಮಿಸಬೇಕಿದೆ
ತಾರತಮ್ಯ ತೊರೆದು…
ಏಕತೆಯನು ಮೆರೆದು….
ಏಕತೆಯನು ಮೆರೆದು….
|| ಈ ಮಾನವರೆಲ್ಲ ಒಂದೇ ಎನುವ
ಮಾನವೀಯತೆ ನುಡಿದು….||
ಸರ್ವ ಸಮಾಜವು ಸೇರಿ
ಸಂಕೋಲೆಗಳನು ಸೀಳಿ
ಸಂಕೋಲೆಗಳನು ಸೀಳಿ
ಮತ ಮೌಢ್ಯಗಳನು ಮೀರಿ
ಸಮತೆಯನು ತಿಳಿ ಹೇಳಿ
ಸಮತೆಯನು ತಿಳಿ ಹೇಳಿ
ಪ್ರಗತಿಯ ಕಡೆಗೆ ನಡೆ ಪ್ರತಿ ಘಳಿಗೆ
ಎಲ್ಲರೂ ಅಡಿಗಡಿಗೆ
ಇರುವೆವು ಮುನ್ನಡೆ ಸಲ್ಲೊಗುರಿಗೆ
ಜನ ಮನ ನಾಡಿ ನುಡಿಸುತ ಹಾಡಿ
ಜನ ಮನ ನಾಡಿ ನುಡಿಸುತ ಹಾಡಿ
ಸ್ವಾವಲಂಬಿಯಾಗಿ…
ಭವ್ಯ ಭಾರತದ ಪ್ರಜೆಯಾಗಿ
ಭಾರತ ದೇಶದ ಉಸಿರಾಗಿ ಹೆಸರಾಗಿ
|| ಈ ಮಾನವರೆಲ್ಲ ಒಂದೇ ಎನುವ
ಮಾನವೀಯತೆ ನುಡಿದು….||
ಶಾಂತಿ ಮಂತ್ರವ ಸಾರಿ
ದೇಶ ಭಕ್ತಿಯನು ತೋರಿ
ದೇಶ ಭಕ್ತಿಯನು ತೋರಿ
ದ್ವೇಷ ನಿನ್ನೊಳಗೆ ತೊರೆದು
ಪ್ರೀತಿ ಮಮತೆಯನು ಮೆರೆದು
ಪ್ರೀತಿ ಮಮತೆಯನು ಮೆರೆದು
ರೈತನೆ ಬಂಧು ಎನ್ನುತ ಇಂದು
ಸಾಗುವ ಜೊತೆ ಜೊತೆಗೆ
ರೈತನ ನಂಬಿದರೆ ಜೀವ ಕೊನೆವೆರೆಗೆ
ದೇಶಕೆ ಶಕ್ತಿಯು ತೋರಿಹ ಭಕ್ತಿಯು
ಅವನ ಬೆವರಲಿ ಮೆರೆದಿದೆ ದೇಶವು
ರೈತನಿಂದ ಹಸಿರು
ಅವನೇ ದೇಶದುಸಿರು
ಜೀವನಾಡಿಯಲಿ ಬೆರೆತಿರುವ…
ಹೆಸರು ಉಳಿಸಿರುವ…
|| ಈ ಮಾನವರೆಲ್ಲ ಒಂದೇ ಎನುವ
ಮಾನವೀಯತೆ ನುಡಿದು
ನವಭಾರತವನು ನಿರ್ಮಿಸಬೇಕಿದೆ
ತಾರತಮ್ಯ ತೊರೆದು…
ಏಕತೆಯನು ಮೆರೆದು….
ಏಕತೆಯನು ಮೆರೆದು….
ಈ ಮಾನವರೆಲ್ಲ ಒಂದೇ ಎನುವ
ಮಾನವೀಯತೆ ನುಡಿದು…..||