-
ಕುರುಕುಲದ ಹಿರಿಯರೆ ಇದೆ ನಿಮ್ಮ ಕುಲ ಚರಿತೆಯೇ
ಮಹಾಮಹಿಮ ಗುರುಗಳೆ ಇದು ನಿಮ್ಮ ಸಂಸ್ಕಾರವೇ
ಸಭ್ಯತೆಯ ಸೀರೆಯನುಸೆಳೆವಾಗ ದುರುಳರು
ತಲೆ ಬಾಗಿ ಕುಳಿತವರು ಪುರುಷ ಪುಂಗವರೇ
ನೀನೆಲ್ಲಿ ಪುರುಷೋತ್ತಮ
ನೀನೆಲ್ಲಿ ಪುರುಷೋತ್ತಮ
ಎಲ್ಲಿರುವೆ ಹರಿಯೆ ದ್ವಾರಕೆಯ ದೊರೆಯೆ
ಈ ಅಬಲೆ ಮೊರೆ ಕೇಳಿ ಬರಬಾರದೆ
ಅಪವಾದವಿದೆಯೆ ಅಪಮಾನ ಸರಿಯೆ
ಸೋದರಿಯ ಗತಿ ನೋಡಿ ದಯೆಬಾರದೆ
ಧರ್ಮೇಚ ಅರ್ಥೇಚ ಕಾಮೇಚ ಮೋಕ್ಷೇಚ
ಎಂದು ಕೈ ಹಿಡಿದವರು ತಲೆಬಾಗಿ ಕುಂತಿಹರು
ದಹಿಸುತಿದೆ ಧರ್ಮ
ಕರುಣಾಕರ ನೀನಲ್ಲವೆ ಕಾರುಣ್ಯವು ನಿನಗಿಲ್ಲವೆ
ಸೆರಗೊಡ್ಡಿ ಬೇಡಿದರು ಕರವೊಡ್ಡಿ ಕೂಗಿದರು
ಕೇಳಿಸದೆ ಕಾಣಿಸದೆ ರಕ್ಷಿಸದೆ ಎಲ್ಲಿರುವೆ ಕೃಷ್ಣ…..
ಸೊಕ್ಕೇರಿ ಮೆರೆದವರ ಮುಕುಟಗಳು ಉರುಳಿ
ಮಣ್ಣಲ್ಲಿ ಮಣ್ಣಾಗಿ ಮರೆಯಾಗಲಿ ನನ್ನ ಶಾಪಾಗ್ನಿಯು
ಮನುಜತ್ವ ಮರೆತವರು ಮತಿಭ್ರಮಣೆಗೊಂಡು
ಮೃತ್ಯುವಿನ ಮಡಿಲಲ್ಲಿ ಚಿರವಾಗಲಿ ನನ್ನ ಶಪತಾಗ್ನಿಯು
ಪತಿವ್ರತೆಯ ಶಾಪವಿದು ಕಾಡುವುದು ಪ್ರತಿಕ್ಷಣವು
ಕುರುವಂಶ ನಿರ್ವಂಶ ಆಗುವುದು ನಿಶ್ಚಿಯವು
ಶ್ರೀ ಕೃಷ್ಣ ಆಣೆಗು
ಯದು ನಂದನ ಬರಲಾರೆಯ ಸಂರಕ್ಷೆಯ ಕೊಡಲಾರೆಯ
ತನು ಮನವ ಅರ್ಪಿಸಿದೆ ನಿನ್ನ ನಾಮ ಅರ್ಚಿಸಿದೆ
ಕೇಳಿಸದೆ ಕಾಣಿಸದೆ ರಕ್ಷಿಸದೆ ಎಲ್ಲಿರುವೆ ಕೃಷ್ಣ…..
-
ಕುರುಕುಲದ ಹಿರಿಯರೆ ಇದೆ ನಿಮ್ಮ ಕುಲ ಚರಿತೆಯೇ
ಮಹಾಮಹಿಮ ಗುರುಗಳೆ ಇದು ನಿಮ್ಮ ಸಂಸ್ಕಾರವೇ
ಸಭ್ಯತೆಯ ಸೀರೆಯನುಸೆಳೆವಾಗ ದುರುಳರು
ತಲೆ ಬಾಗಿ ಕುಳಿತವರು ಪುರುಷ ಪುಂಗವರೇ
ನೀನೆಲ್ಲಿ ಪುರುಷೋತ್ತಮ
ನೀನೆಲ್ಲಿ ಪುರುಷೋತ್ತಮ
ಎಲ್ಲಿರುವೆ ಹರಿಯೆ ದ್ವಾರಕೆಯ ದೊರೆಯೆ
ಈ ಅಬಲೆ ಮೊರೆ ಕೇಳಿ ಬರಬಾರದೆ
ಅಪವಾದವಿದೆಯೆ ಅಪಮಾನ ಸರಿಯೆ
ಸೋದರಿಯ ಗತಿ ನೋಡಿ ದಯೆಬಾರದೆ
ಧರ್ಮೇಚ ಅರ್ಥೇಚ ಕಾಮೇಚ ಮೋಕ್ಷೇಚ
ಎಂದು ಕೈ ಹಿಡಿದವರು ತಲೆಬಾಗಿ ಕುಂತಿಹರು
ದಹಿಸುತಿದೆ ಧರ್ಮ
ಕರುಣಾಕರ ನೀನಲ್ಲವೆ ಕಾರುಣ್ಯವು ನಿನಗಿಲ್ಲವೆ
ಸೆರಗೊಡ್ಡಿ ಬೇಡಿದರು ಕರವೊಡ್ಡಿ ಕೂಗಿದರು
ಕೇಳಿಸದೆ ಕಾಣಿಸದೆ ರಕ್ಷಿಸದೆ ಎಲ್ಲಿರುವೆ ಕೃಷ್ಣ…..
ಸೊಕ್ಕೇರಿ ಮೆರೆದವರ ಮುಕುಟಗಳು ಉರುಳಿ
ಮಣ್ಣಲ್ಲಿ ಮಣ್ಣಾಗಿ ಮರೆಯಾಗಲಿ ನನ್ನ ಶಾಪಾಗ್ನಿಯು
ಮನುಜತ್ವ ಮರೆತವರು ಮತಿಭ್ರಮಣೆಗೊಂಡು
ಮೃತ್ಯುವಿನ ಮಡಿಲಲ್ಲಿ ಚಿರವಾಗಲಿ ನನ್ನ ಶಪತಾಗ್ನಿಯು
ಪತಿವ್ರತೆಯ ಶಾಪವಿದು ಕಾಡುವುದು ಪ್ರತಿಕ್ಷಣವು
ಕುರುವಂಶ ನಿರ್ವಂಶ ಆಗುವುದು ನಿಶ್ಚಿಯವು
ಶ್ರೀ ಕೃಷ್ಣ ಆಣೆಗು
ಯದು ನಂದನ ಬರಲಾರೆಯ ಸಂರಕ್ಷೆಯ ಕೊಡಲಾರೆಯ
ತನು ಮನವ ಅರ್ಪಿಸಿದೆ ನಿನ್ನ ನಾಮ ಅರ್ಚಿಸಿದೆ
ಕೇಳಿಸದೆ ಕಾಣಿಸದೆ ರಕ್ಷಿಸದೆ ಎಲ್ಲಿರುವೆ ಕೃಷ್ಣ…..