-
ಕಣ್ಣೀರ ಒರೆಸೋಕೆ ಬೇರೆ ಯಾರು ಬೇಕು
ಮನಸ್ಸು ಮಾಡು ನಿನ್ನ ಕೈಯ್ಯೆ ಸಾಕು
ಬಾಳಲ್ಲಿ ಗೆಲ್ಲೋಕೆ ಭಯವು ಏಕೆ ಬೇಕು
ಹೃದಯ ಮೀಟೊ ಒಂದು ನಗುವೆ ಸಾಕು
ಎದೆಗುಂದದೇನೆ ಜಗವನ್ನು ಗೆಲ್ಲು
ಮನಸ್ಸಂಜದಂತೆ ಬಲವಾಗಿ ನಿಲ್ಲು ಆಆ…
ಕರುಣೆಯಲ್ಲಿ ಕಣಜವಾಗು ಕದನದಲ್ಲಿ ಕವಚವಾಗು
||ಕಣ್ಣೀರ ಒರೆಸೋಕೆ ಬೇರೆ ಯಾರು ಬೇಕು
ಮನಸ್ಸು ಮಾಡು ನಿನ್ನ ಕೈಯ್ಯೆ ಸಾಕು||
ಅರ್ಜುನನ ಧ್ವಜದಲಿರೋ ಹನುಮಂತನ ಹಾಗೆ
ಗಗನವ ಸೀಳಿ ಹಾರುವ ಶಕ್ತಿ ನಿನ್ನೊಳಗಿದೆ ತಮ್ಮ
ನಿನ್ನ ಬದುಕಿಗೆ ನೀ ಬ್ರಹ್ಮ
ಯೋಚಿಸಿದ ಹಾಗೆ ಬದುಕುಂಟು ಮುಂದೆ
ಪ್ರಾರ್ಥನೆಯ ಹಾಗೆ ಫಲವುಂಟು ಇಂದೆ
ಕತ್ತಲೆದುರು ಸೂರ್ಯನಾಗು
ಕಷ್ಟದೆದುರು ಶೌರ್ಯನಾಗು
||ಕಣ್ಣೀರ ಒರೆಸೋಕೆ ಬೇರೆ ಯಾರು ಬೇಕು
ಮನಸ್ಸು ಮಾಡು ನಿನ್ನ ಕೈಯ್ಯೆ ಸಾಕು||
ಅವಮಾನ ಅಪಮಾನ ಬಂದರೆ ಬರಲೇಳು
ಅವುಗಳೆ ನಿನ್ನ ಸಾಧನೆಗಳಿಗೆ ಮೆಟ್ಟಿಲುಗಳ ಸಾಲು
ಬರದು ಎಂದು ನಿನಗೆ ಸೋಲು
ಬಿದ್ದವನು ತಾನೆ ಎದ್ದೇಳುತ್ತಾನೆ
ದಾರಿ ಸಿಗದೋನೆ ದೊರೆಯಾಗುತ್ತಾನೆ
ಹೆದರಬೇಡ ಪರರಿಗಾಗಿ
ಬಾಳಿ ಬದುಕು ಜನರಿಗಾಗಿ
||ಕಣ್ಣೀರ ಒರೆಸೋಕೆ ಬೇರೆ ಯಾರು ಬೇಕು
ಮನಸ್ಸು ಮಾಡು ನಿನ್ನ ಕೈಯ್ಯೆ ಸಾಕು||
-
ಕಣ್ಣೀರ ಒರೆಸೋಕೆ ಬೇರೆ ಯಾರು ಬೇಕು
ಮನಸ್ಸು ಮಾಡು ನಿನ್ನ ಕೈಯ್ಯೆ ಸಾಕು
ಬಾಳಲ್ಲಿ ಗೆಲ್ಲೋಕೆ ಭಯವು ಏಕೆ ಬೇಕು
ಹೃದಯ ಮೀಟೊ ಒಂದು ನಗುವೆ ಸಾಕು
ಎದೆಗುಂದದೇನೆ ಜಗವನ್ನು ಗೆಲ್ಲು
ಮನಸ್ಸಂಜದಂತೆ ಬಲವಾಗಿ ನಿಲ್ಲು ಆಆ…
ಕರುಣೆಯಲ್ಲಿ ಕಣಜವಾಗು ಕದನದಲ್ಲಿ ಕವಚವಾಗು
||ಕಣ್ಣೀರ ಒರೆಸೋಕೆ ಬೇರೆ ಯಾರು ಬೇಕು
ಮನಸ್ಸು ಮಾಡು ನಿನ್ನ ಕೈಯ್ಯೆ ಸಾಕು||
ಅರ್ಜುನನ ಧ್ವಜದಲಿರೋ ಹನುಮಂತನ ಹಾಗೆ
ಗಗನವ ಸೀಳಿ ಹಾರುವ ಶಕ್ತಿ ನಿನ್ನೊಳಗಿದೆ ತಮ್ಮ
ನಿನ್ನ ಬದುಕಿಗೆ ನೀ ಬ್ರಹ್ಮ
ಯೋಚಿಸಿದ ಹಾಗೆ ಬದುಕುಂಟು ಮುಂದೆ
ಪ್ರಾರ್ಥನೆಯ ಹಾಗೆ ಫಲವುಂಟು ಇಂದೆ
ಕತ್ತಲೆದುರು ಸೂರ್ಯನಾಗು
ಕಷ್ಟದೆದುರು ಶೌರ್ಯನಾಗು
||ಕಣ್ಣೀರ ಒರೆಸೋಕೆ ಬೇರೆ ಯಾರು ಬೇಕು
ಮನಸ್ಸು ಮಾಡು ನಿನ್ನ ಕೈಯ್ಯೆ ಸಾಕು||
ಅವಮಾನ ಅಪಮಾನ ಬಂದರೆ ಬರಲೇಳು
ಅವುಗಳೆ ನಿನ್ನ ಸಾಧನೆಗಳಿಗೆ ಮೆಟ್ಟಿಲುಗಳ ಸಾಲು
ಬರದು ಎಂದು ನಿನಗೆ ಸೋಲು
ಬಿದ್ದವನು ತಾನೆ ಎದ್ದೇಳುತ್ತಾನೆ
ದಾರಿ ಸಿಗದೋನೆ ದೊರೆಯಾಗುತ್ತಾನೆ
ಹೆದರಬೇಡ ಪರರಿಗಾಗಿ
ಬಾಳಿ ಬದುಕು ಜನರಿಗಾಗಿ
||ಕಣ್ಣೀರ ಒರೆಸೋಕೆ ಬೇರೆ ಯಾರು ಬೇಕು
ಮನಸ್ಸು ಮಾಡು ನಿನ್ನ ಕೈಯ್ಯೆ ಸಾಕು||