ಯಾರು ಬರೆಯದ ಕವಿತೆ ಬದುಕು
ಖಾಲಿ ಪುಟದಲಿ ಪದವ ಹುಡುಕು
ಹುಟ್ಟು ಸಾವುಗಳ ಒಗಟು ಬಿಡಿಸೋರು ಯಾರು
ತಾಯಿಯ ಗರ್ಭಕ್ಕೂ ಭೂಮಿಯ ಗರ್ಭಕ್ಕೂ
ನಡುವೆ ನೆಮ್ಮದಿ ಹುಡುಕಾಟ
ಮಣ್ಣಿನಲ್ಲೆ ನಿನಗೆ ಮುಕ್ತಿ ಎಲ್ಲವು ಶೂನ್ಯ
ಪ್ರತಿಯೊಬ್ಬರೂನು ಹೇಳಬೇಕು ಕೊನೆಯ ವಿದಾಯ
ಯಾರು ಬಿಡಿಸದ ಒಗಟು ಬದುಕು
ಸಮಸಮವಿಲ್ಲಿ ಕತ್ತಲುಬೆಳಕು
ನೂರು ತಿರುವುಗಳ ಈ ದಾರಿಯ ತುದಿಯು ಗೋರಿ
ಸೂತ್ರಧಾರ ಮೇಳಿರಲು ಗೊಂಬೆಯು ನೀನು
ಮಾನವ ನೀನೊಂದು ಮೂಳೆ ಮಾಂಸದ ತಡಿಕೆ
ನೀರ ಮೇಲಿನ ಗುಳ್ಳೆ ಅರಿಯೊ
ನೀ ಕಾಲದ ಕರೆ ಬಂದೊಡನೆ ತೆರಳೆಬೇಕು
ಮಾನವ ನಿದಿರೆಗೆ ಬಂದು ಹೋಗುವ ಅತಿಥಿ
ತೃಣವು ನೀನು ಇಲ್ಲಿ ತಿಳಿಯೊ
ಮಸಣವೆ ನಿನಗುಳಿಯುವುದಿಲ್ಲಿ
ಕೊನೆಘಳಿಗೆಯಲಿ ಕೈಗಳು ಖಾಲಿ
ಯಾರು ಹಿಡಿಯದ ಚಿಟ್ಟೆ ಬದುಕು
ಬೆರಳ ತುದಿ ಹೊಳೆದರೆ ಬಣ್ಣ ಸಾಕು
ಯಾರ ಅಣತೆಗು ಕಾಯುವುದಿಲ್ಲ ಸಾವು
ಭ್ರಮೆಯ ಪೊರೆಯ ಕಳಚಿ ನೀನು ವಾಸ್ತವ ತಿಳಿಯೊ
ಜಗದ ಜಾತ್ರೆಯಲಿ ಸುತ್ತಲು ನೂರು ಜನ
ನಿನ್ನವರು ಯಾರಯ್ಯ ಹೇಳು ನೀ
ನಾನು ನನ್ನದೆಂಬುದಲ್ಲ ಶಾಶ್ವತವಲ್ಲ
ಕಣ್ಣಬಿಂದುವೆ ನಿನ್ನ ಬಂಧು ನೋವಿಗೆ ಅದುವೆ ಜೊತೆಗಾರ
ಮಸಣವೆ ನಿನಗುಳಿಯುವುದಿಲ್ಲಿ
ಕೊನೆಘಳಿಗೆಯಲಿ ಕೈಗಳು ಖಾಲಿ
ಯಾರು ಬರೆಯದ ಕವಿತೆ ಬದುಕು
ಖಾಲಿ ಪುಟದಲಿ ಪದವ ಹುಡುಕು
ಹುಟ್ಟು ಸಾವುಗಳ ಒಗಟು ಬಿಡಿಸೋರು ಯಾರು
ತಾಯಿಯ ಗರ್ಭಕ್ಕೂ ಭೂಮಿಯ ಗರ್ಭಕ್ಕೂ
ನಡುವೆ ನೆಮ್ಮದಿ ಹುಡುಕಾಟ
ಮಣ್ಣಿನಲ್ಲೆ ನಿನಗೆ ಮುಕ್ತಿ ಎಲ್ಲವು ಶೂನ್ಯ
ಪ್ರತಿಯೊಬ್ಬರೂನು ಹೇಳಬೇಕು ಕೊನೆಯ ವಿದಾಯ
ಯಾರು ಬಿಡಿಸದ ಒಗಟು ಬದುಕು
ಸಮಸಮವಿಲ್ಲಿ ಕತ್ತಲುಬೆಳಕು
ನೂರು ತಿರುವುಗಳ ಈ ದಾರಿಯ ತುದಿಯು ಗೋರಿ
ಸೂತ್ರಧಾರ ಮೇಳಿರಲು ಗೊಂಬೆಯು ನೀನು
ಮಾನವ ನೀನೊಂದು ಮೂಳೆ ಮಾಂಸದ ತಡಿಕೆ
ನೀರ ಮೇಲಿನ ಗುಳ್ಳೆ ಅರಿಯೊ
ನೀ ಕಾಲದ ಕರೆ ಬಂದೊಡನೆ ತೆರಳೆಬೇಕು
ಮಾನವ ನಿದಿರೆಗೆ ಬಂದು ಹೋಗುವ ಅತಿಥಿ
ತೃಣವು ನೀನು ಇಲ್ಲಿ ತಿಳಿಯೊ
ಮಸಣವೆ ನಿನಗುಳಿಯುವುದಿಲ್ಲಿ
ಕೊನೆಘಳಿಗೆಯಲಿ ಕೈಗಳು ಖಾಲಿ
ಯಾರು ಹಿಡಿಯದ ಚಿಟ್ಟೆ ಬದುಕು
ಬೆರಳ ತುದಿ ಹೊಳೆದರೆ ಬಣ್ಣ ಸಾಕು
ಯಾರ ಅಣತೆಗು ಕಾಯುವುದಿಲ್ಲ ಸಾವು
ಭ್ರಮೆಯ ಪೊರೆಯ ಕಳಚಿ ನೀನು ವಾಸ್ತವ ತಿಳಿಯೊ
ಜಗದ ಜಾತ್ರೆಯಲಿ ಸುತ್ತಲು ನೂರು ಜನ
ನಿನ್ನವರು ಯಾರಯ್ಯ ಹೇಳು ನೀ
ನಾನು ನನ್ನದೆಂಬುದಲ್ಲ ಶಾಶ್ವತವಲ್ಲ
ಕಣ್ಣಬಿಂದುವೆ ನಿನ್ನ ಬಂಧು ನೋವಿಗೆ ಅದುವೆ ಜೊತೆಗಾರ
ಮಸಣವೆ ನಿನಗುಳಿಯುವುದಿಲ್ಲಿ
ಕೊನೆಘಳಿಗೆಯಲಿ ಕೈಗಳು ಖಾಲಿ