ಮೋಡ ಕವಿದ ನೀಲಿ ಬಾನಿಗೆ
ಬಂತು ಕಿರು ಬೆಳಕು…
ದಾರಿ ಮರೆತ ಒಂಟಿ ಬಾಳಿಗೆ
ಈಗ ಹೊಸ ದಿಕ್ಕು…
ಗಡುವು ಪಡೆದು ಚಲಿಸಿತು
ಇಂದು ನಿಂತ ಗಡಿಯಾರ…
ವಿಧಿಯ ಮುಂದೆ ನಡೆಯದು
ಎಂದೂ ಮನಸಿನ ವ್ಯವಹಾರ..
ಮುರಿದು ಮನ ದೂರ ನೀ ಹೋಗದಿರು
ಕಸಿದು ಋಣ ಮೌನದಲಿ ಬದುಕದಿರು
ನೀ ಕೊಟ್ಟ ಬಾಷೆಯ ನೆನಪಿಡುವೇ..
ನೀ ಬಿಟ್ಟ ದಾರಿಯ ಮರೆತಿರುವೇ…
ತಾರೀಖು ಎಣಿಸುತ ಸಾಗಿರುವೇ…
ಈ ವೇಳೆ ಮುಗಿಯಲು ಕಾದಿರುವೇ…
ದೂರ ಇರು ಒಲವೇ….
ಯಾವ ಕಡೆಗೆ ನಾನು ಹೋಗಲಿ
ದಾರಿ ಬಲು ಕಠಿಣ…
ಬೇಕು ಎನದೆ ಬೇಡ ಎನ್ನದೆ
ಕಾಡುತಿದೆ ಮೌನ…
ನನ್ನ ಎದೆಯ ಕೂಗು ಈಗ
ನಿಂಗೆ ಕೇಳಿಸದೇ…
ಬಂದು ಬೇಗ ಸೇರು ನನ್ನ
ಹಠವನು ಸಾಧಿಸದೇ…..
ಮೋಡ ಕವಿದ ನೀಲಿ ಬಾನಿಗೆ
ಬಂತು ಕಿರು ಬೆಳಕು…
ದಾರಿ ಮರೆತ ಒಂಟಿ ಬಾಳಿಗೆ
ಈಗ ಹೊಸ ದಿಕ್ಕು…
ಗಡುವು ಪಡೆದು ಚಲಿಸಿತು
ಇಂದು ನಿಂತ ಗಡಿಯಾರ…
ವಿಧಿಯ ಮುಂದೆ ನಡೆಯದು
ಎಂದೂ ಮನಸಿನ ವ್ಯವಹಾರ..
ಮುರಿದು ಮನ ದೂರ ನೀ ಹೋಗದಿರು
ಕಸಿದು ಋಣ ಮೌನದಲಿ ಬದುಕದಿರು
ನೀ ಕೊಟ್ಟ ಬಾಷೆಯ ನೆನಪಿಡುವೇ..
ನೀ ಬಿಟ್ಟ ದಾರಿಯ ಮರೆತಿರುವೇ…
ತಾರೀಖು ಎಣಿಸುತ ಸಾಗಿರುವೇ…
ಈ ವೇಳೆ ಮುಗಿಯಲು ಕಾದಿರುವೇ…
ದೂರ ಇರು ಒಲವೇ….
ಯಾವ ಕಡೆಗೆ ನಾನು ಹೋಗಲಿ
ದಾರಿ ಬಲು ಕಠಿಣ…
ಬೇಕು ಎನದೆ ಬೇಡ ಎನ್ನದೆ
ಕಾಡುತಿದೆ ಮೌನ…
ನನ್ನ ಎದೆಯ ಕೂಗು ಈಗ
ನಿಂಗೆ ಕೇಳಿಸದೇ…
ಬಂದು ಬೇಗ ಸೇರು ನನ್ನ
ಹಠವನು ಸಾಧಿಸದೇ…..