ಎದೆಯ ದನಿಯ ಹಾಡು ಕೇಳು…….
ಹೃದಯದ ಬಿರಿದ ಭೂಮಿ ಬಾಳು….
ಎದೆಯ ದನಿಯ ಹಾಡು ಕೇಳು
ಹೃದಯದ ಬಿರಿದ ಭೂಮಿ ಬಾಳು
ಮೇದಿನಿಗು ಮಾತಿದೆ ನಮ್ಮ ಭಾವ ಸೋತಿದೆ
ಬದಲಾವಣೆ ಬೇಕಿದೆ ಹೊಸತು ಹಾದಿ ಕರೆದಿದೆ
ಪರಿಸರವ ಉಳಿಸೋ ಅವಸರ ಕೇಳು.. ಮನದ ಮಾತ
ಧುಮ್ಮಿಕ್ಕಲಿ ಚಿಮ್ಮಿ ಹರಿಯಲಿ ಈ ಅರಿವಿನ ಜಲಪಾತ
ಮಣ್ಣ ಕೊಟ್ಟವಳು ಅದರಲಿ ಅನ್ನವನ್ನಿಟ್ಟವಳು
ಹಸಿರು ಕೊಟ್ಟವಳು ಜೀವದುಸಿರ ಇಟ್ಟವಳು
ಮಣ್ಣ ಕೊಟ್ಟವಳು ಅದರಲಿ ಅನ್ನವನ್ನಿಟ್ಟವಳು
ಹಸಿರು ಕೊಟ್ಟವಳು ಜೀವದುಸಿರ ಇಟ್ಟವಳು
ಹರಿಯುವ ನದಿಯ ಗಿರಿತೊರೆ ಸಿರಿಯ ನಮಗೇ ಬಿಟ್ಟವಳು
ಜೀವಸಂಕುಲದ ಸೃಷ್ಟಿಯ ದೃಷ್ಟಿಯ ತಿಲಕವನ್ನಿಟ್ಟವಳು
ಋಣವಿದೆ ನಮಗೆ ಕಣಕಣದಲ್ಲು ತೀರಿಸು ಬಾರೊ ಕ್ಷಣಕ್ಷಣದಲ್ಲು
ಕಾಲದ ಕರೆಯಿದು ಸಾಗುವ ಜೊತೆಜೊತೆಯಲ್ಲೂ
ಮೇದಿನಿಗು ಮಾತಿದೆ ನಮ್ಮ ಭಾವ ಸೋತಿದೆ
ಬದಲಾವಣೆ ಬೇಕಿದೆ ಹೊಸತು ಹಾದಿ ಕರೆದಿದೆ
ಅರಿತೋ ಅರಿಯದೆ ಮಾಡಿದ ತಪ್ಪು ದುಬಾರಿ ಹೊತ್ತಲಿ ನಿಲ್ಲಿಸಿದೆ
ದುರಿತ ಕಾಲವ ಮೀರದೆ ಹೋದರೆ ಪರಿಪರಿ ವಿಪತ್ತು ಕಾಯುತಿದೆ
ಅರಿತೋ ಅರಿಯದೆ ಮಾಡಿದ ತಪ್ಪು ದುಬಾರಿ ಹೊತ್ತಲಿ ನಿಲ್ಲಿಸಿದೆ
ದುರಿತ ಕಾಲವ ಮೀರದೆ ಹೋದರೆ ಪರಿಪರಿ ವಿಪತ್ತು ಕಾಯುತಿದೆ
ಏಳುವ ಸಮು ಬದಲಾಗುವ ವಿನಯ
ನಾಳಿನ ಬಾಳಿಗೆ ಭವಿಷ್ಯ ಬರೆದರೆ ನಮ್ಮದೆ ವಿಜಯ
ನನ್ನಿಂದೇನು ಆಗುವುದೆಂಬ ಸಂಕೋಚ ಮೀರು ಮೊದಲಲ್ಲಿ
ಬಿಂದುವಿನಿಂದಲೆ ಸಿಂಧುವು ಎಂಬ ಸತ್ಯವನರಿತು ಸಂಕಲ್ಪದಲ್ಲಿ
ಎದ್ದು ಬಾ ಧೃಡತೆಯ ಹೊತ್ತು ಬಾ ಭೂರಮೆಯ ಋಣವನು ತೀರಿಸು ಬಾ….
ಮೇದಿನಿಗು ಮಾತಿದೆ ನಮ್ಮ ಭಾವ ಸೋತಿದೆ
ಬದಲಾವಣೆ ಬೇಕಿದೆ ಹೊಸತು ಹಾದಿ ಕರೆದಿದೆ
||ಎದೆಯ ದನಿಯ ಹಾಡು ಕೇಳು…….
ಹೃದಯದ ಬಿರಿದ ಭೂಮಿ ಬಾಳು….
ಎದೆಯ ದನಿಯ ಹಾಡು ಕೇಳು
ಹೃದಯದ ಬಿರಿದ ಭೂಮಿ ಬಾಳು
ಮೇದಿನಿಗು ಮಾತಿದೆ ನಮ್ಮ ಭಾವ ಸೋತಿದೆ
ಬದಲಾವಣೆ ಬೇಕಿದೆ ಹೊಸತು ಹಾದಿ ಕರೆದಿದೆ
ಪರಿಸರವ ಉಳಿಸೋ ಅವಸರ ಕೇಳು.. ಅವಳ ಸ್ವಗತ
ಧುಮ್ಮಿಕ್ಕಲಿ ಚಿಮ್ಮಿ ಹರಿಯಲಿ ಈ ಅರಿವಿನ ಜಲಪಾತ||
ಎದೆಯ ದನಿಯ ಹಾಡು ಕೇಳು…….
ಹೃದಯದ ಬಿರಿದ ಭೂಮಿ ಬಾಳು….
ಎದೆಯ ದನಿಯ ಹಾಡು ಕೇಳು
ಹೃದಯದ ಬಿರಿದ ಭೂಮಿ ಬಾಳು
ಮೇದಿನಿಗು ಮಾತಿದೆ ನಮ್ಮ ಭಾವ ಸೋತಿದೆ
ಬದಲಾವಣೆ ಬೇಕಿದೆ ಹೊಸತು ಹಾದಿ ಕರೆದಿದೆ
ಪರಿಸರವ ಉಳಿಸೋ ಅವಸರ ಕೇಳು.. ಮನದ ಮಾತ
ಧುಮ್ಮಿಕ್ಕಲಿ ಚಿಮ್ಮಿ ಹರಿಯಲಿ ಈ ಅರಿವಿನ ಜಲಪಾತ
ಮಣ್ಣ ಕೊಟ್ಟವಳು ಅದರಲಿ ಅನ್ನವನ್ನಿಟ್ಟವಳು
ಹಸಿರು ಕೊಟ್ಟವಳು ಜೀವದುಸಿರ ಇಟ್ಟವಳು
ಮಣ್ಣ ಕೊಟ್ಟವಳು ಅದರಲಿ ಅನ್ನವನ್ನಿಟ್ಟವಳು
ಹಸಿರು ಕೊಟ್ಟವಳು ಜೀವದುಸಿರ ಇಟ್ಟವಳು
ಹರಿಯುವ ನದಿಯ ಗಿರಿತೊರೆ ಸಿರಿಯ ನಮಗೇ ಬಿಟ್ಟವಳು
ಜೀವಸಂಕುಲದ ಸೃಷ್ಟಿಯ ದೃಷ್ಟಿಯ ತಿಲಕವನ್ನಿಟ್ಟವಳು
ಋಣವಿದೆ ನಮಗೆ ಕಣಕಣದಲ್ಲು ತೀರಿಸು ಬಾರೊ ಕ್ಷಣಕ್ಷಣದಲ್ಲು
ಕಾಲದ ಕರೆಯಿದು ಸಾಗುವ ಜೊತೆಜೊತೆಯಲ್ಲೂ
ಮೇದಿನಿಗು ಮಾತಿದೆ ನಮ್ಮ ಭಾವ ಸೋತಿದೆ
ಬದಲಾವಣೆ ಬೇಕಿದೆ ಹೊಸತು ಹಾದಿ ಕರೆದಿದೆ
ಅರಿತೋ ಅರಿಯದೆ ಮಾಡಿದ ತಪ್ಪು ದುಬಾರಿ ಹೊತ್ತಲಿ ನಿಲ್ಲಿಸಿದೆ
ದುರಿತ ಕಾಲವ ಮೀರದೆ ಹೋದರೆ ಪರಿಪರಿ ವಿಪತ್ತು ಕಾಯುತಿದೆ
ಅರಿತೋ ಅರಿಯದೆ ಮಾಡಿದ ತಪ್ಪು ದುಬಾರಿ ಹೊತ್ತಲಿ ನಿಲ್ಲಿಸಿದೆ
ದುರಿತ ಕಾಲವ ಮೀರದೆ ಹೋದರೆ ಪರಿಪರಿ ವಿಪತ್ತು ಕಾಯುತಿದೆ
ಏಳುವ ಸಮು ಬದಲಾಗುವ ವಿನಯ
ನಾಳಿನ ಬಾಳಿಗೆ ಭವಿಷ್ಯ ಬರೆದರೆ ನಮ್ಮದೆ ವಿಜಯ
ನನ್ನಿಂದೇನು ಆಗುವುದೆಂಬ ಸಂಕೋಚ ಮೀರು ಮೊದಲಲ್ಲಿ
ಬಿಂದುವಿನಿಂದಲೆ ಸಿಂಧುವು ಎಂಬ ಸತ್ಯವನರಿತು ಸಂಕಲ್ಪದಲ್ಲಿ
ಎದ್ದು ಬಾ ಧೃಡತೆಯ ಹೊತ್ತು ಬಾ ಭೂರಮೆಯ ಋಣವನು ತೀರಿಸು ಬಾ….
ಮೇದಿನಿಗು ಮಾತಿದೆ ನಮ್ಮ ಭಾವ ಸೋತಿದೆ
ಬದಲಾವಣೆ ಬೇಕಿದೆ ಹೊಸತು ಹಾದಿ ಕರೆದಿದೆ
||ಎದೆಯ ದನಿಯ ಹಾಡು ಕೇಳು…….
ಹೃದಯದ ಬಿರಿದ ಭೂಮಿ ಬಾಳು….
ಎದೆಯ ದನಿಯ ಹಾಡು ಕೇಳು
ಹೃದಯದ ಬಿರಿದ ಭೂಮಿ ಬಾಳು
ಮೇದಿನಿಗು ಮಾತಿದೆ ನಮ್ಮ ಭಾವ ಸೋತಿದೆ
ಬದಲಾವಣೆ ಬೇಕಿದೆ ಹೊಸತು ಹಾದಿ ಕರೆದಿದೆ
ಪರಿಸರವ ಉಳಿಸೋ ಅವಸರ ಕೇಳು.. ಅವಳ ಸ್ವಗತ
ಧುಮ್ಮಿಕ್ಕಲಿ ಚಿಮ್ಮಿ ಹರಿಯಲಿ ಈ ಅರಿವಿನ ಜಲಪಾತ||