ದೇವರೇ ಕೇಳು, ನ್ಯಾಯವೇ ಹೇಳು
ಕಣ್ತೆರೆದು ನೋಡು, ಈ ನಮ್ಮ ಪಾಡು
ಮಾನವ ನೋವಾದರೆ, ದೇವರ ಬೇಡಾಡುವ
ದೇವರೆ ನೋವು ನೀಡಿರೆ, ಯಾರಿಗೆ ತಾ ಹೇಳುವ
ದೇವರೇ ಕೇಳೂ…
ಮರಗಿಡದ ಜೀವಕಳೆವ,
ಕ್ರಿಮಿಗಳ ಕೊಲ್ಲುವುದು ನ್ಯಾಯ
ಗಿಳಿಗಳಿರೊ ಗೂಡಿನೊಳಗೆ,
ಹಾವನು ಬಿಡುವುದು ಹೇಯ
ಹುಲಿಗೆ ಹುಲಿ, ಬೇಟೆ ಎನುವ,
ನಿಯಮವು ಮೃಗಗಳಿಗಿಲ್ಲ
ಮನುಜನರು ಏಕೋ ತಿಳಿಯೆ,
ಮನುಜನೆ ಕೊಲ್ಲುತಿಹನಲ್ಲ
ಹಾಳಾದರೆ ದಾರ, ಚೂರಾಗದೆ ಹಾರ
ಕಾಯೋ ದೇವ ಬಂದು,
ಹಾಗೆ ಬಂದು ಬಾಳಲು
ದೇವರೇ ಕೇಳು, ನ್ಯಾಯವೇ ಹೇಳು
ಖುಷಿಪಡುತ ಬಾಳುತಿಹರು
ಕೆಡುಕರು ಇದು ಕಲಿಗಾಲ
ಸುಗುಣರಿಗೆ ನೋವು ಅಳುವು,
ಎಲ್ಲಿ ಇದೆ ಉಳಿಗಾಲ
ಬದುಕಿನಲಿ ಏನೆ ಬರಲಿ,
ಎದುರಿಸೊ ಬಲವನು ನೀಡೋ
ಎದುರಿನಲಿ ಯಾರೆ ಬರಲಿ,
ಮನಸನು ಅಚಲವ ಮಾಡೋ
ಹಾಲಾಹಲ ಇಲ್ಲಿ, ಗಂಗಾಜಲ ಎಲ್ಲಿ
ನೀನೆ ನಮ್ಮ ದಿಕ್ಕು, ತಾನೆ ಬಂದು ಕೈಹಿಡಿ
ದೇವರೇ ಕೇಳು, ನ್ಯಾಯವೇ ಹೇಳು
ಕಣ್ತೆರೆದು ನೋಡು, ಈ ನಮ್ಮ ಪಾಡು
ಮಾನವ ನೋವಾದರೆ, ದೇವರ ಬೇಡಾಡುವ
ದೇವರೆ ನೋವು ನೀಡಿರೆ, ಯಾರಿಗೆ ತಾ ಹೇಳುವ
ದೇವರೇ ಕೇಳು
ದೇವರೇ ಕೇಳು, ನ್ಯಾಯವೇ ಹೇಳು
ಕಣ್ತೆರೆದು ನೋಡು, ಈ ನಮ್ಮ ಪಾಡು
ಮಾನವ ನೋವಾದರೆ, ದೇವರ ಬೇಡಾಡುವ
ದೇವರೆ ನೋವು ನೀಡಿರೆ, ಯಾರಿಗೆ ತಾ ಹೇಳುವ
ದೇವರೇ ಕೇಳೂ…
ಮರಗಿಡದ ಜೀವಕಳೆವ,
ಕ್ರಿಮಿಗಳ ಕೊಲ್ಲುವುದು ನ್ಯಾಯ
ಗಿಳಿಗಳಿರೊ ಗೂಡಿನೊಳಗೆ,
ಹಾವನು ಬಿಡುವುದು ಹೇಯ
ಹುಲಿಗೆ ಹುಲಿ, ಬೇಟೆ ಎನುವ,
ನಿಯಮವು ಮೃಗಗಳಿಗಿಲ್ಲ
ಮನುಜನರು ಏಕೋ ತಿಳಿಯೆ,
ಮನುಜನೆ ಕೊಲ್ಲುತಿಹನಲ್ಲ
ಹಾಳಾದರೆ ದಾರ, ಚೂರಾಗದೆ ಹಾರ
ಕಾಯೋ ದೇವ ಬಂದು,
ಹಾಗೆ ಬಂದು ಬಾಳಲು
ದೇವರೇ ಕೇಳು, ನ್ಯಾಯವೇ ಹೇಳು
ಖುಷಿಪಡುತ ಬಾಳುತಿಹರು
ಕೆಡುಕರು ಇದು ಕಲಿಗಾಲ
ಸುಗುಣರಿಗೆ ನೋವು ಅಳುವು,
ಎಲ್ಲಿ ಇದೆ ಉಳಿಗಾಲ
ಬದುಕಿನಲಿ ಏನೆ ಬರಲಿ,
ಎದುರಿಸೊ ಬಲವನು ನೀಡೋ
ಎದುರಿನಲಿ ಯಾರೆ ಬರಲಿ,
ಮನಸನು ಅಚಲವ ಮಾಡೋ
ಹಾಲಾಹಲ ಇಲ್ಲಿ, ಗಂಗಾಜಲ ಎಲ್ಲಿ
ನೀನೆ ನಮ್ಮ ದಿಕ್ಕು, ತಾನೆ ಬಂದು ಕೈಹಿಡಿ
ದೇವರೇ ಕೇಳು, ನ್ಯಾಯವೇ ಹೇಳು
ಕಣ್ತೆರೆದು ನೋಡು, ಈ ನಮ್ಮ ಪಾಡು
ಮಾನವ ನೋವಾದರೆ, ದೇವರ ಬೇಡಾಡುವ
ದೇವರೆ ನೋವು ನೀಡಿರೆ, ಯಾರಿಗೆ ತಾ ಹೇಳುವ
ದೇವರೇ ಕೇಳು