ಮಣ್ಣಿನೊಳಗಿಂದ ತಾ ಅನ್ನವನು ವಿಂಗಡಿಸಿ
ಉಣ್ಣೆಂದು ಜಗಕ್ಕೆಲ್ಲ ಕೊಡುವ ರೈತ
ಪ್ರಾಣ ಪಕ್ಷಿಯ ಕೊಕ್ಕಿಗೆ ಇನಿತಿನಿತೆ ಕಾಳಿಡುವ
ತಾನಲ್ಲವೆ ನಿಜದಿ ಜೀವದಾತ
ಮಣ್ಣಿನೊಳಗಿಂದ ತಾ ಅನ್ನವನು ವಿಂಗಡಿಸಿ
ಉಣ್ಣೆಂದು ಜಗಕ್ಕೆಲ್ಲ ಕೊಡುವ ರೈತ
ನೆತ್ತಿಮೇಲಿನ ವಲ್ಲಿ ನಿತ್ಯ ಶೋಭಿತ ಮುಕುಟ
ಉಳುವವನೆ ಛತ್ರಪತಿ ಮನುಕುಲಕ್ಕೆ
ನೊಗ ನೇಗಿಲು ಇರುವಲ್ಲಿ ಇಲ್ಲ ಹಸಿವಿನ ಭೀತಿ
ಬೆವರಿನ ಸತ್ವವು ಇರಲು ಪೈರ ಬುಡಕ್ಕೆ
ಹಸಿವ ಕೊಲ್ಲಲು ತಾನು ಬಾಗಿಸುವ ಮೈ ಬಿಲ್ಲ
ಹೂಡಿ ಕಾಯಕದಸ್ತ್ರ ಹಗಲು ಇರುಳು
ಉರಿಬಿಸಿಲೊ ಬಿರುಮಳೆಯೊ ಲೆಕ್ಕಿಸದೆ ದುಡಿಯುವವನು
ಕೂತುಂಡ ದಾಖಲೆಗಳಿಲ್ಲ ಎಲ್ಲು
||ಮಣ್ಣಿನೊಳಗಿಂದ ತಾ ಅನ್ನವನು ವಿಂಗಡಿಸಿ
ಉಣ್ಣೆಂದು ಜಗಕ್ಕೆಲ್ಲ ಕೊಡುವ ರೈತ||
ಉಳ್ಳಮಂದಿಯ ಬೆಳ್ಳಿ ತಟ್ಟೆಯೊಳಗಿನ ಭಕ್ಷ್ಯ
ಬಿತ್ತಿ ಬೆಳೆವಾತನ ಶ್ರಮದ ಗುಟ್ಟು
ಸುಖದಂಗುಲಿಯ ತುದಿಗೆ ಅಂಟಿದ ಗೂಡಿನ ಮೂಲ
ಮೇಲಿ ಹಿಡಿದಂಗೈಯ್ಯ ಒರಟು ಗಂಟು
ಗುಳವೆಳೆವ ನೇರ ಗೆರೆ ಶಿಸ್ತು ಬಾಳಿಗೆ ಸಾಕ್ಷಿ
ಬೇಕಿಲ್ಲ ಬೋಧೆಗಳ ಹಂಗು ಇವಗೆ
ಮಣ್ಣ ಧರ್ಮದ ದೀಕ್ಷೆ ತೊಟ್ಟು ಬದುಕವನೀತ
ಮಣ್ಣೊಡಲ ಕಣ್ಣಾಗಿ ಕೊನೆಯವರೆಗೆ
||ಮಣ್ಣಿನೊಳಗಿಂದ ತಾ ಅನ್ನವನು ವಿಂಗಡಿಸಿ
ಉಣ್ಣೆಂದು ಜಗಕ್ಕೆಲ್ಲ ಕೊಡುವ ರೈತ||
ಮಣ್ಣಿನೊಳಗಿಂದ ತಾ ಅನ್ನವನು ವಿಂಗಡಿಸಿ
ಉಣ್ಣೆಂದು ಜಗಕ್ಕೆಲ್ಲ ಕೊಡುವ ರೈತ
ಪ್ರಾಣ ಪಕ್ಷಿಯ ಕೊಕ್ಕಿಗೆ ಇನಿತಿನಿತೆ ಕಾಳಿಡುವ
ತಾನಲ್ಲವೆ ನಿಜದಿ ಜೀವದಾತ
ಮಣ್ಣಿನೊಳಗಿಂದ ತಾ ಅನ್ನವನು ವಿಂಗಡಿಸಿ
ಉಣ್ಣೆಂದು ಜಗಕ್ಕೆಲ್ಲ ಕೊಡುವ ರೈತ
ನೆತ್ತಿಮೇಲಿನ ವಲ್ಲಿ ನಿತ್ಯ ಶೋಭಿತ ಮುಕುಟ
ಉಳುವವನೆ ಛತ್ರಪತಿ ಮನುಕುಲಕ್ಕೆ
ನೊಗ ನೇಗಿಲು ಇರುವಲ್ಲಿ ಇಲ್ಲ ಹಸಿವಿನ ಭೀತಿ
ಬೆವರಿನ ಸತ್ವವು ಇರಲು ಪೈರ ಬುಡಕ್ಕೆ
ಹಸಿವ ಕೊಲ್ಲಲು ತಾನು ಬಾಗಿಸುವ ಮೈ ಬಿಲ್ಲ
ಹೂಡಿ ಕಾಯಕದಸ್ತ್ರ ಹಗಲು ಇರುಳು
ಉರಿಬಿಸಿಲೊ ಬಿರುಮಳೆಯೊ ಲೆಕ್ಕಿಸದೆ ದುಡಿಯುವವನು
ಕೂತುಂಡ ದಾಖಲೆಗಳಿಲ್ಲ ಎಲ್ಲು
||ಮಣ್ಣಿನೊಳಗಿಂದ ತಾ ಅನ್ನವನು ವಿಂಗಡಿಸಿ
ಉಣ್ಣೆಂದು ಜಗಕ್ಕೆಲ್ಲ ಕೊಡುವ ರೈತ||
ಉಳ್ಳಮಂದಿಯ ಬೆಳ್ಳಿ ತಟ್ಟೆಯೊಳಗಿನ ಭಕ್ಷ್ಯ
ಬಿತ್ತಿ ಬೆಳೆವಾತನ ಶ್ರಮದ ಗುಟ್ಟು
ಸುಖದಂಗುಲಿಯ ತುದಿಗೆ ಅಂಟಿದ ಗೂಡಿನ ಮೂಲ
ಮೇಲಿ ಹಿಡಿದಂಗೈಯ್ಯ ಒರಟು ಗಂಟು
ಗುಳವೆಳೆವ ನೇರ ಗೆರೆ ಶಿಸ್ತು ಬಾಳಿಗೆ ಸಾಕ್ಷಿ
ಬೇಕಿಲ್ಲ ಬೋಧೆಗಳ ಹಂಗು ಇವಗೆ
ಮಣ್ಣ ಧರ್ಮದ ದೀಕ್ಷೆ ತೊಟ್ಟು ಬದುಕವನೀತ
ಮಣ್ಣೊಡಲ ಕಣ್ಣಾಗಿ ಕೊನೆಯವರೆಗೆ
||ಮಣ್ಣಿನೊಳಗಿಂದ ತಾ ಅನ್ನವನು ವಿಂಗಡಿಸಿ
ಉಣ್ಣೆಂದು ಜಗಕ್ಕೆಲ್ಲ ಕೊಡುವ ರೈತ||